ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪದ್ಮಿನಿ ಸಾಹು ಅಧಿಕಾರ ವಹಿಸಿಕೊಂಡರು.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪದ್ಮಿನಿ ಸಾಹು ಅಧಿಕಾರ ವಹಿಸಿಕೊಂಡರು.

ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್‌ ಇಲಾಖೆಯ ಗುರಿ. ನನ್ನ ಆದ್ಯತೆಯೂ ಅದುವೇ’ ಎಂದು ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹೇಳಿದರು.

ಜಿಲ್ಲಾ ಎಸ್‌ಪಿಯಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿರುವ ಪದ್ಮಿನಿ ಸಾಹು ಮಾತನಾಡಿ ಜಿಲ್ಲೆ ನನಗಿನ್ನೂ ಹೊಸದು. ಹಾಗಾಗಿ ತಕ್ಷಣಕ್ಕೆ ಹೊಸ ಯೋಜನೆ ಹಾಕಿಕೊಂಡಿಲ್ಲ. ಆದರೆ, ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಾನು ಆದ್ಯತೆ ನೀಡುತ್ತೇನೆ 2021ರಲ್ಲಿ ನಾನು ಕರ್ನಾಟಕ ಕೆಡರ್‌ಗೆ ವರ್ಗಾವಣೆಗೊಂಡಿದ್ದೇನೆ. ಈಗ ಕರ್ನಾಟಕವೇ ನನ್ನ ಮನೆ. ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಂಡಿದ್ದೇನೆ. ನನ್ನ ರಾಜ್ಯ ಒಡಿಶಾದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ ಎಂದರು.

ಎಲ್ಲ ಠಾಣೆಗೂ ಭೇಟಿ: ಜಿಲ್ಲೆಯಲ್ಲಿ ಯಾವುದೆಲ್ಲಾ ಪ್ರಮುಖ ಸಮಸ್ಯೆಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಗಣಿಗಾರಿಕೆ ಸೇರಿದಂತೆ ಹಲವು ವಿಷಯಗಳಿರಬಹುದು. ಅವುಗಳನ್ನು ಅಧ್ಯಯನ ನಡೆಸಬೇಕಿದೆ. ಅಪರಾಧ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಬೇಕಾಗಿದೆ. ಎಲ್ಲ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ’ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಅರಣ್ಯ ಪ್ರದೇಶ ಇಲ್ಲಿ ಹೆಚ್ಚಾಗಿದೆ. ಒಡಿಶಾದಂತೆಯೇ ಇಲ್ಲಿಯೂ ಆದಿವಾಸಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾಸನ ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ.

Thu Feb 2 , 2023
ಹಾಸನ ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸಂಚಾರ ನಡೆಸುತ್ತಿರೋ ರೇವಣ್ಣ ಕುಟುಂಬ ಅರಸೀಕೆರೆ ಕ್ಷೇತ್ರದಲ್ಲಿ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಮಿಂಚಿನ ಸಂಚಾರ ಹಾಲಿ ಜೆಡಿಎಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಪಕ್ಷ ಬಿಡುವ ಮುನ್ಸೂಚನೆ ಹಿನ್ನಲೆ ಆಕ್ಟಿವ್ ಆದ ಜೆಡಿಎಸ್ ನಾಯಕರು ಅರಸೀಕೆರೆಯಲ್ಲಿ ಪಕ್ಷದ‌ ಕಾರ್ಯಕರ್ತರು ಮತ್ತು ಅನರ್ಹ ನಗರಸಭೆ ಸದಸ್ಯರ ಜೊತೆ ಸಭೆ ನಡೆಸಿದ ಸೂರಜ್ ಶಾಸಕ ಶಿವಲಿಂಗೇಗೌಡ ಜೊತೆ ತಿಕ್ಕಾಟದಿಂದ ಬಿಜೆಪಿ ಸಂಪರ್ಕ […]

Advertisement

Wordpress Social Share Plugin powered by Ultimatelysocial