ಲಾಹೋರ್ ನಿಂದ ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನ್ ಇಂಟರ್ನ್ಯಾಷನಲ್ ರ್ಲೈನ್ಸ್ ಲ್ಯಾಂಡಿಂಗ್ ಆಗುವ ವೇಳೆ ಮಾಡಲ್ ಟೌನ್ ನಗರದಲ್ಲಿ ಪತನಗೊಂಡಿದೆ. ಇದರಿಂದ ನಗರದ ೮ ರಿಂದ ೧೦ ಮನೆಗಳು ಧ್ವಂಸಗೊಂಡಿವೆ ಮತ್ತು ವಿಮಾನದಲ್ಲಿ ೧೦೭ ಮಂದಿ ಪ್ರಯಾಣಿಕರಿದ್ದರೆಂದು ತಿಳಿದುಬಂದಿದೆ. ವಿಮಾನ ಬಿದ್ದ ಕೂಡಲೇ ಸ್ಥಳದಲ್ಲಿ ಭೀಕರ ಸದ್ದು ಮತ್ತು ಧೂಳು ಎದ್ದಿದ್ದು, ಬಳಿಕ ಹೊಗೆ ಆವರಿಸಿಕೊಂಡಿದೆ. ಹೀಗಾಗಿ ವಿಮಾನದಲ್ಲಿರುವವರ ಸ್ಥಿತಿಗತಿ ಮತ್ತು ಪತನ ಸ್ಥಳದಲ್ಲಿ ಯಾರಾದರೂ ಇದ್ದಿದ್ದರೆ ಅವರ ಪರಿಸ್ಥಿತಿ ಕಷ್ಟವಾಗುತ್ತಿತ್ತು. […]
ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ನಂತರ ಇದೇ ಮೊದಲ ಬಾರಿಗೆ ಅಂತರ್ ಜಿಲ್ಲಾ ರೈಲು ಸೇವೆ ಪುನರ್ ಆರಂಭಗೊಂಡಿದ್ದು,ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು ಬೆಳಗಾವಿಗೆ ನಿರ್ಗಮಿಸಿತು. ರೈಲಿನಲ್ಲಿ ಒಳಗಡೆ ಇದ್ದ ಕೆಲ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದ ಅಧಿಕಾರಿಗಳು, ಪೊಲೀಸರು ಚಪ್ಪಾಳೆ ತಟ್ಟುವ ಮೂಲಕ ಈ ರೈಲು ಸೇವೆಗೆ ಹರ್ಷ ವ್ಯಕ್ತಪಡಿಸಿದರು. ರಾಜ್ಯದೊಳಗೆ ಸಂಚರಿಸಿದ ಮೊದಲ ರೈಲಿಗೆ ನಿಲ್ದಾಣದಲ್ಲಿನ ಹಂಗಾಮಿ ಸ್ವಚ್ಛತಾ […]
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ.ಯಡಿಯೂರಪ್ಪ ಹಣಕಾಸು ಸಮಸ್ಯೆಯಾದರು ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡುವುದನ್ನು ನಿಲ್ಲಿಸುವುದು ಬೇಡ ಎಂದು ಅಧಿಕಾರಿಗಳಿಗೆ ನರ್ದೇಶನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳ ಅಭ್ರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಗಣಿತ, ವಿಜ್ಞಾನ ಶಿಕ್ಷಕರ ಕೊರತೆ ನೀಗಿಸಲು ಬಿ.ಎಡ್. ಮಾಡಿರುವ ಇಂಜಿನಿಯರಿಂಗ್ ಪದವೀಧರರ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ […]
ದಕ್ಷಿಣ ಕೊರಿಯಾದ ಖಾಲಿ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆದಿದೆ. ಈ ವೇಳೆ ಖಾಲಿಯಿದ್ದ ಪ್ರೇಕ್ಷಕರ ಖುರ್ಚಿ ಮೇಲೆ ಕುಳಿತ ಗೊಂಬೆಗಳು ಸುದ್ದಿ ಮಾಡಿವೆ. ಖಾಲಿ ಖುರ್ಚಿ ಮೇಲೆ ಸೆಕ್ಸ್ ಡಾಲ್ ಗಳನ್ನು ಕೂರಿಸಲಾಗಿತ್ತು. ಕೊರೊನಾ ವೈರಸ್ನಿಂದಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡುವವರಿಗೆ ನಿಷೇಧ ಹೇರಲಾಗಿದೆ. ಕಳೆದ ಭಾನುವಾರದ ನಡೆದ ಪಂದ್ಯದ ವೇಳೆ ಸೆಕ್ಸ್ ಡಾಲ್ಸ್ ಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಲಾಗಿತ್ತು. ಗೊಂಬೆಗಳಿಗೆ ಟೀ ಶರ್ಟ್ ಹಾಕಿದ್ದರು. ಗೊಂಬೆ ಕೈನಲ್ಲಿದ್ದ ಫಲಕಗಳಲ್ಲಿ ಸೆಕ್ಸ್ […]
ಕಲಬುರ್ಗಿಯ ಸೇಡಂನ ಮೋಮಿನಪುರ ಬಡಾವಣೆಯ ರಾಜು ತಾಯಿತ್ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ ಹಾಗೂ ನಾಲ್ವರಿಗೆ ಗಾಯಗಳಾಗಿದ್ದವು, ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಪೈಕಿ ಮತ್ತೋರ್ವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮನೆ ಮಾಲೀಕ ರಾಜು ತಾಯಿತ್(50) ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಾಗೂ ಗಾಯಗೊಂಡವರು ಮೃತನ ತಾಯಿ ಗಂಗಮ್ಮ ತಾಯಿತ್ (70),ಹೆಂಡತಿ ಸುಮಾ ತಾಯಿತ್ (40) ಮತ್ತು ಆತನ ಮಗ ಬಸಪ್ಪ […]
ಬೆಂಗಳೂರು: ಲಾಕ್ ಡೌನ್ ಮುಕ್ತಾಯದ ನಂತರ ಸರ್ಕಾರಿ ಸ್ವಾಮ್ಯದ ಬಸ್ ಸಂಚಾರ ಆರಂಭವಾಗಿದೆ. ಈ ನಡುವೆ ಇಂದು ರಾಜ್ಯ ಖಾಸಗಿ ಬಸ್ ಗಳ ಮಾಲೀಕರ ನಿಯೋಗವು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿತು. ಮುಖ್ಯವಾಗಿ ಲಾಕ್ ಡೌನ್ ನಿಂದಾಗಿ ಭಾರಿ ನಷ್ಟ ಉಂಟಾಗಿದೆ. ಖಾಸಗಿ ಬಸ್ ಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಮೊದಲ ಆರು ತಿಂಗಳು ಸಂಪೂರ್ಣ ರಸ್ತೆ ತೆರಿಗೆ ವಿನಾಯ್ತಿ […]
ಕೊರೊನಾ ಭೀತಿಯಿಂದ ವಿಧಾನ ಪರಿಚತ್ ಮುಂದೂಡಲ್ಪಡುತ್ತದೆ ಎನ್ನಲಾಗಿತ್ತು, ಆದ್ರೆ ಇದೀಗ ನಿಗದಿತ ಸಮಯಕ್ಕೆ ಚುನಾವನೆ ನಡೆಯುವ ಸಾಧ್ಯತೆ ಇದ್ದು, ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ಲಾಬಿ ಆರಂಭಗೊAಡಿದೆ. ಒಟ್ಟು ೧೬ ಪರಿಷತ್ ಸ್ಥಾನಗಳ ಚುನಾವಣೆ ಅವಧಿ ಜೂನ್ ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಈ ಪೈಕಿ ೭ಚುನಾಯಿತ ಸ್ಥಾನಗಳಿದ್ದರೆ, ೫ನಾಮನಿರ್ದೇಶಿತ ಸ್ಥಾನಗಳಿದ್ದು, ಅದೇ ರೀತಿ ಪದವೀಧರ ಕ್ಷೇತ್ರಗಳ ಸ್ಥಾನಗಳು ೨ ಹಾಗೂ ಶಿಕ್ಷಕರ ಕ್ಷೇತ್ರಗಳ ಸ್ಥಾನಗಳು ೨ ಖಾಲಿಯಾಗಲಿವೆ.
ಬೆಂಗಳೂರು: ಭ್ರಷ್ಟ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ಪ್ರಭುಶಂಕರ್, ಇನ್ಸ್ ಪೆಕ್ಟರ್ ಆರ್ ಎಂ ಅಜಯ್, ನಿರಂಜನ್ ಕುಮಾರ್ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಿಗರೇಟ್ ವಿತರಕರು ಮತ್ತು ನಕಲಿ ಮಾಸ್ಕ್ ಮಾರಾಟಗಾರರಿಂದ ಕೊಟ್ಯಂತರ ರೂ. ಲಂಚ ಪಡೆದ ಆರೋಪದಡಿ ದಾಳಿ ನಡೆಸಲಾಗಿದೆ.ಸಹಕಾರ ನಗರದ ಎಸಿಪಿ ಪ್ರಭುಶಂಕರ್ ಮನೆ ಸೇರಿ ನಗರದ ಏಳು ಕಡೆ ಡಿಎಸ್ ಪಿ ರಾಜೇಂದ್ರ ನೇತೃತ್ವದ ತಂಡ […]
ಬೆಂಗಳೂರು: ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಪುಣರಾಗಿದ್ದ ಉಭಯ ಗಾನ ವಿದುಷಿ ಶ್ಯಾಮಲಾ ಜಿ. ಭಾವೆ(79) ಅವರು ಶೇಷಾದ್ರಿಪುರದ ಸ್ವಗೃಹದಲ್ಲಿಂದು ಬೆಳಗ್ಗೆ ವಿಧಿವಶರಾದರು. ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಪುಣರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದವರು ಶ್ಯಾಮಲಾ ಜಿ. ಭಾವೆ. ಸಂಗೀತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿರಿಸಿದ ಶ್ಯಾಮಲಾ ಅವರು ಕರ್ನಾಟಕ ಮಹಿಳಾ ಸಂಗೀತಗಾರರಲ್ಲಿ ಅಗ್ರಗಣ್ಯರು.
ಬೆಂಗಳೂರು: ಕೊರೊನಾ ಆರ್ಭಟದ ನಡುವೆಯೂ ವಿಧಾನಪರಿಷತ್ ಚುನಾವಣೆ ಲಾಬಿ ತೀವ್ರಗೊಳ್ಳುತ್ತಿದೆ. ಕೊರೊನಾ ಕಾರಣದಿಂದ ಪರಿಷತ್ ಚುನಾವಣೆ ಮುಂದೂಡಲ್ಪಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಗದಿತ ಅವಧಿಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಮೇಲ್ಮನೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ಲಾಬಿ ಆರಂಭಗೊಂಡಿದೆ. ಜೂನ್ ತಿಂಗಳಲ್ಲಿ ಒಟ್ಟು 16 ಪರಿಷತ್ ಸ್ಥಾನಗಳ ಅವಧಿ ಮುಕ್ತಾಯಗೊಳ್ಳಲಿದೆ. ಈ ಪೈಕಿ ಚುನಾಯಿತ ಸ್ಥಾನಗಳು 7 ಇದ್ದರೆ, 5 ನಾಮನಿರ್ದೇಶಿತ ಸ್ಥಾನಗಳಿವೆ. ಅದೇ ರೀತಿ ಪದವೀಧರ ಕ್ಷೇತ್ರಗಳ ಸ್ಥಾನಗಳು 2 […]