ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ರು, ನೀವೇನಾದ್ರೂ ಬರ್ತಿರಾ..?
ಬಾಗಲಕೋಟೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ..
ಯಾಕೆ ನನಗೆ ನಮ್ಮೂರು ಇಲ್ವಾ..?
ನನ್ನೂ ಹಾಳು ಮಾಡಲು ಹೊಂಟೀ ಏನು..?
ಅಭಿವೃದ್ದಿಗಾಗಿಯೇ ನಮ್ಮೂರ ಜನ ನನಗೆ ತಂದೆ ತಾಯಿ ಇದ್ದಂಗೆ..
ಆರು ಚುನಾವಣೆಯಲ್ಲಿ ಐದು ಸಲ ಗೆಲ್ಲಿಸಿದ್ದಾರೆ..
ಗೆಲ್ಲಿಸಿದವರಿಗೆ ದ್ರೋಹ ಮಾಡಿ ಬೇರೆ ಕ್ಷೇತ್ರಕ್ಕೆ ಬರಲೇನು..?
ಅಲ್ಲಿ ಸೋತೆ, ಮತ್ತೆ ಅಲ್ಲೆ ಹೋದೆ..
ಅಭಿವೃದ್ದಿ ಮಾಡ್ತೇನೆ ಎಂದೆ ಮತ್ತೆ ಗೆಲ್ಲಿಸಿದ್ರು..
ಇದು ರಾಜಕಾರಣದಲ್ಲಿ ಇರಬೇಕು..
ಅವರ ಬಿಟ್ಟು ಇವರು, ಇವರು ಬಿಟ್ಟು ಅವರ್ಯಾರು ಅಂತ ಮಕ್ಕಳಾಟ ಹಂಗಾಗಿದೆ ಇಲ್ಲಿ ಎಂದ ಈಶ್ವರಪ್ಪ…
ಬಾಗಲಕೋಟೆಯಲ್ಲಿ ಈಶ್ವರಪ್ಪ ಹೇಳಿಕೆ.
ಭವಾನಿ ರೇವಣ್ಣ ಸ್ಪರ್ಧೆ ವಿಚಾರ
ಬಾಗಲಕೋಟೆಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ
ರಾಜಕೀಯ ಸ್ಥಾನಮಾನಕ್ಕಾಗಿ ಇಂದು ಯಾರು ಎಲ್ಲಿ ಬೇಕಾದ್ರೂ ನಿಲ್ಲಬಹುದು
ಈ ಮಧ್ಯೆ ಭವಾನಿ ರೇವಣ್ಣ ನಾನೇ ಕ್ಯಾಂಡಿಡೇಟ್ ಅಂತಿದ್ದಾರೆ
ಅವರಿಗೇನು ಪಕ್ಷ ಇಲ್ವಾ? ಹೇಳೋರು ಕೇಳೋರು ಇಲ್ವಾ?
ಅನಿತಾ ಕುಮಾರಸ್ವಾಮಿ ಅವರ ಮಗನ್ನ ಡಿಕ್ಲೈರ್ ಮಾಡ್ತಾರೆ
ಅವರವರೇ ತಮ್ಮನ್ನ, ತಮ್ಮ ಮಕ್ಕಳನ್ನ ಘೋಷಣೆ ಮಾಡಿದ್ರೆ ಹೇಗೆ?
ಹೀಗಾದ್ರೆ ಒಂದು ಪಾರ್ಟಿ ಅಂತ ಯಾಕೆ ಇರಬೇಕು?
ಚುನಾವಣೆ ಸಮಿತಿ ಅಂತ ಯಾಕಿರಬೇಕು?
ಇದು ಒಳ್ಳೆಯ ಬೆಳವಣಿಗೆ ಅಲ್ಲ
ಬಿಜೆಪಿಯಲ್ಲಿ ಇಂತಹ ವ್ಯವಸ್ಥೆ ಇಲ್ಲ
ಪಾರ್ಟಿ ಗುರುತಿಸಿ ಟಿಕೆಟ್ ನೀಡುತ್ತೇ ಎಲ್ಲರೂ ಶ್ರಮಿಸಿ ಗೆಲ್ಲುತ್ತೇವೆ ಎಂದ ಈಶ್ವರಪ್ಪ
ಎಲೆಕ್ಷನ್ ಟೈಮ್ ನಲ್ಲೇ ಗಿಫ್ಟ್ ಹಂಚಿಕೆ ವಿಚಾರ
ಚುನಾವಣೆ ವೇಳೆ ನೇತೃತ್ವ, ಸಂಘಟನೆ, ಅಭಿವೃದ್ಧಿ ಬಗ್ಗೆ ಚರ್ಚೆ ಆಗ್ತಿದಿಯಾ?
ಯಾವ್ಯಾವ ಪಾರ್ಟಿಯವ್ರು ಏನೇನು ಕೊಟ್ರು?
ಇದು ಇವತ್ತು ಹೊಸದಲ್ಲ, ರಾಜಕಾರಣದಲ್ಲಿ ನಡೀತಾಯಿರುವ ವ್ಯವಸ್ಥೆನೆ
ಇವರು ೫೦ ರೂ ಕೊಟ್ರೆ, ಅವ್ರು ೫೦೦ ಕೊಡ್ತಾರೆ
ಅವ್ರು ೫೦೦ ಕೊಟ್ರೆ, ಇವ್ರು ೧೦೦೦ ಕೊಡ್ತಾರೆ
ಇವ್ರು ಕುಕ್ಕರ್ ಕೊಟ್ರೆ, ಅವ್ರು ಮಿಕ್ಸರ್ ಕೊಡ್ತಾರೆ
ಟಿವಿಗಳನ್ನು ಕೊಟ್ರು, ಇದು ಒಳ್ಳೆಯದಲ್ಲ
ಮತದಾರ ಜಾಗೃತಿ ಆಗೋವರೆಗೂ ಇದು ಸಮಸ್ಯೆನೆ
ಚುನಾವಣೆ ಅಭ್ಯರ್ಥಿ ಆಸೆ ನಾನು ಗೆಲ್ಲಬೇಕು ಅನ್ನೋದು
ಆದ್ರೆ ಮತದಾರರನ್ನು ಭ್ರಷ್ಟರನ್ನ ಮಾಡಿ, ತಾವು ಭ್ರಷ್ಟರಾಗೋದು ಒಳ್ಳೆಯದಲ್ಲ.
https://play.google.com/store/apps/details?id=com.speed.newskannada