ಡಾ.ರಾಜ್‌ ಕುಟುಂಬದ ಬಗ್ಗೆ ದರ್ಶನ್‌ ಫ್ಯಾಮಿಲಿಗೆ ಎಷ್ಟು ಗೌರವ ಇದೆ

ಡಾ. ರಾಜ್‌ಕುಮಾರ್‌ ಹಾಗೂ ಅವರ ಕುಟುಂಬದ ಮೇಲಿನ ಗೌರವಕ್ಕೆ, ಅವರು ತಮಗೆ ಮಾಡಿರುವ ಸಹಾಯವನ್ನು ನೆನೆಯಲು ತೂಗುದೀಪ್‌ ಶ್ರೀನಿವಾಸ್‌ ಅವರು ತಮ್ಮ ಮನೆಗೆ ”ಮುಪಾ ಕೃಪ” ಎಂದು ಹೆಸರಿಟ್ಟಿದ್ದರು. ಆ ಹೆಸರನ್ನು ಮೈಸೂರಿನ ಮನೆಯಲ್ಲಿ ಈಗಲೂ ನೋಡಬಹುದು.ಹೊಸಪೇಟೆಯಲ್ಲಿ ನಟ ದರ್ಶನ್‌  ಮೇಲೆ ಚಪ್ಪಲಿ ಎಸೆತ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಬಹಳ ಚರ್ಚೆಯಾಗುತ್ತಿದೆ. ‘ಕ್ರಾಂತಿ’  ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಇರುವ ದರ್ಶನ್‌, ಕಳೆದ ಭಾನುವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಕಿಡಿಗೇಡಿಯೊಬ್ಬ ವೇದಿಕೆ ಮೇಲೆ ನಿಂತಿದ್ದ ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್‌  ಗಣ್ಯರು ಘಟನೆಯನ್ನು ಖಂಡಿಸಿದ್ದರು.ಕೆಲವು ದಿನಗಳ ಹಿಂದೆ ‘ಕ್ರಾಂತಿ’ ಸಿನಿಮಾ ಇಂಟರ್‌ವ್ಯೂನಲ್ಲಿ ಪುನೀತ್‌ ಬಗ್ಗೆ ಆಡಿದ ಮಾತುಗಳನ್ನು ಕೇಳಿದ ಪುನೀತ್‌ ಅಭಿಮಾನಿಗಳು, ದರ್ಶನ್‌ ಪುನೀತ್‌ ಹಾಗೂ ದೊಡ್ಮನೆಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ”ಅಭಿಮಾನಿಗಳು ನನಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ವಿಚಾರದಲ್ಲೇ ನಾವು ನೋಡಬಹುದು. ಅಪ್ಪು ನಿಧನರಾದ ನಂತರ ಅವರಿಗೆಷ್ಟು ಅಭಿಮಾನಿಗಳು ಇದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ನಾನು ಬದುಕಿರುವಾಗಲೇ ಜನರ ಪ್ರೀತಿ ನೋಡಿದ್ದೇನೆ. ನನಗೆ ಅದು ಸಾಕು” ಎಂದು ದರ್ಶನ್ ಹೇಳಿದ್ದರು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ದರ್ಶನ್‌, ಈ ರೀತಿ ಮಾತನಾಡುವ ಮೂಲಕ ಪುನೀತ್‌ಗೆ ಅವಮಾನ ಮಾಡಿದ್ದಾರೆ, ಅವರು ಕೂಡಲೇ ಕ್ಷಮೆ ಕೇಳಬೇಕು ಎಂದರು. ಇದೇ ವಿಚಾರ ಹೊಸಪೇಟೆ ಘಟನೆಗೆ ಕಾರಣವಾಗಿದೆ. ಆದರೆ ಇನ್ನೂ ಕೆಲವರು ದರ್ಶನ್‌, ಪುನೀತ್‌ ಅವರನ್ನು ಅವಮಾನ ಮಾಡುವಂತದ್ದು ಏನೂ ಮಾತನಾಡಲಿಲ್ಲ ಎನ್ನುತ್ತಿದ್ದಾರೆದರ್ಶನ್‌, ಅನೇಕ ವೇದಿಕೆಗಳಲ್ಲಿ ನಾನು ದೊಡ್ಮನೆ ಬ್ಯಾನರ್‌ ಮೂಲಕವೇ ಸಿನಿಮಾಗೆ ಬಂದಿದ್ದು, ನನಗೆ ಡಾ. ರಾಜ್‌ಕುಮಾರ್‌ ಕುಟುಂಬದ ಬಗ್ಗೆ ಬಹಳ ಗೌರವ ಇದೆ ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ 11 ದಿನಗಳವರೆಗೂ ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ್ದರು. ತಮ್ಮ ಹುಟ್ಟುಹಬ್ಬವನ್ನು ಕೂಡಾ ಆಚರಿಸಲಿಲ್ಲ. ಅಂತದ್ದರಲ್ಲಿ ಅವರು ಪುನೀತ್‌ ಅವರಿಗೆ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ ಎಂದು ದರ್ಶನ್‌ ಅಭಿಮಾನಿಗಳು ವಾದಿಸಿದ್ದರು. ಇದೀಗ ದರ್ಶನ್‌ ವಿಚಾರವಾಗಿ ಅವರ ಅಭಿಮಾನಿಗಳು ಮತ್ತೊಂದು ವಿಚಾರವನ್ನು ಜನರ ಮುಂದೆ ಇಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕದಲ್ಲಿನ ರಾಯಭಾರಿ ಕಚೇರಿ ಕಟ್ಟಡ ಮಾರಾಟಕ್ಕಿಟ್ಟ ಪಾಕ್!

Wed Dec 28 , 2022
ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಸಾಧ್ಯವಾಗದೆ ಇದೀಗ ಅಮೆರಿಕದಲ್ಲಿರುವ ತನ್ನ ರಾಯಭಾರ ಕಚೇರಿ ಕಟ್ಟಡವನ್ನು ಮಾರಾಟಕ್ಕಿಟ್ಟಿದೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಆಸ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.ವಾಷಿಂಗ್ಟನ್‌ನಲ್ಲಿ ರಾಯಭಾರಿ ಕಚೇರಿ ಕಟ್ಟಡದ ಮಾರಾಟಕ್ಕೆ ಬಿಡ್‌ಗಳನ್ನು ಆಹ್ವಾನಿಸಲಾಗಿದ್ದು, ಇದುವರೆಗೂ ಮೂರು ಬಿಡ್‌ಗಳನ್ನು ಸಲ್ಲಿಸಲಾಗಿದೆ ಎಂದು ಡಾನ್ ದಿನಪತ್ರಿಕೆ ಬಹಿರಂಗಪಡಿಸಿದೆ.ಈ ಮೂರು ಬಿಡ್‌ಗಳಲ್ಲಿ, ಒಂದು ಬಿಡ್ ಯಹೂದಿ ಕಂಪನಿ ಮತ್ತು ಇನ್ನೊಂದು ಭಾರತದಿಂದ ರಿಯಲ್ ಎಸ್ಟೇಟ್ ಕಂಪನಿ ಇದೆ. ಪಾಕಿಸ್ತಾನದ ಓರಿಲ್ಡರ್ […]

Advertisement

Wordpress Social Share Plugin powered by Ultimatelysocial