ಪದೇ ಪದೇ ವಿವಾದಾತ್ಮಕ ಹೇಳಿಕೆ‌ ನೀಡುತ್ತಿರೊ ಸಲಗರ್.

ವಿವಾದಾತ್ಮಕ ಹೇಳಿಕೆಯಿಂದಲೆ ಪದೆ ಪದೆ ಚರ್ಚೆಗೆ ಗ್ರಾಸವಾಗುತ್ತಿರುವ ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಮತ್ತೆ ಸಮುದಾಯ ವಿರೋದಿ ಹೇಳಿಕೆ ನೀಡಿದ್ದು, ಬಸವಕಲ್ಯಾಣದಲ್ಲಿ‌ ಯಾವುದೆ ಕಾರಣಕ್ಕೂ ಟಿಪ್ಪು ಪೂಜೆ ಮಾಡಲು ಬಿಡೊಲ್ಲಾ, ಒಂದು ವೇಳೆ ಪೂಜೆ ಮಾಡೋ ತಾಕತ್ತಿದ್ದವರು ಪೂಜೆ ಮಾಡಿ ತೋರಿಸಲಿ. ಅದನ್ನ ತಡೆಯೋಕೆ ನಾನು ಅಪ್ಪಟ ಹಿಂದೂ ಕಾರ್ಯಕರ್ತನಾಗಿ ಹುಲಿ ತರಹ ಬರ್ತೇನೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಬಸವಕಲ್ಯಾಣ ನಗರದ ವರ್ಷ ಕಲ್ಯಾಣ ಮಂಟಪದಲ್ಲಿ ನಡೆದ ನಗರದ ಭೂತ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಬಸವಕಲ್ಯಾಣದಲ್ಲಿ ಕೇವಲ ಬಸವ ಜಯಂತಿ, ಶಿವಾಜಿ‌ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿ‌‌ ಮಾತ್ರ ಸಾದ್ಯ. ನಾನು‌ ಅಪ್ಪಟ ರಾಮನ‌ ಭಕ್ತನಿದ್ದೇನೆ, ಹಿಂದೂ ಧರ್ಮದ ಸೇವಕ ಇದ್ದೇನೆ. ಬಸವಕಲ್ಯಾಣ ಚುನಾವಣೆಯಲ್ಲಿ ಈ ಬಾರಿ ಹಿಂದುಗಳ ತಾಕತ್ತು ಏನು ಅನ್ನೋದನ್ನ ತೋರಿಸ್ತಿವಿ. ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದ್ರೆ, ಮಹಿಳೆಯರು ಸುರಕ್ಷಿತವಾಗಿ ಮನೆ ಸೇರುವುದಿಲ್ಲಾ. ನಮ್ಮ ಅಕ್ಕ- ತಂಗಿಯರು, ತಾಯಂದಿರು ಸುರಕ್ಷಿತವಾಗಿ ಮನೆ ಸೇರಬೇಕು ಅಂದ್ರೆ ಬಿಜೆಪಿ ಅಭ್ಯರ್ಥಿ ಶರಣು‌ ಸಲಗರ ಗೆಲ್ಲಬೇಕು‌ ಎಂದಿದ್ದಾರೆ. ನಾನು ಶಾಸಕನಾಗಿದ್ಧ 20 ತಿಂಗಳ ಅವಧಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಮುದಾಯದವರಿಗೆ ಯಾವುದೆ ರೀತಿ ತೊಂದರೆ ಕೊಟ್ಟಿಲ್ಲ, ಆದರೇ ಇಂದು ಕಾಂಗ್ರೆಸ್‌ನವರು ನನ್ನ ಪರ ಇರುವ ಮುಸ್ಲಿಂ ಸಮುದಾಯದ ಬೆಂಬಲಿಗರಿಗೆ ಧಮ್ಕಿ‌ ಹಾಕಿ ಕಾಂಗ್ರೆಸ್ ಸೇರ್ಪಡೆ‌ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಮಗನ ವಿರುದ್ದ‌‌ ನನ್ನ ಕದನ ಆರಂಭ ಆಗಿದೆ. ಲಗಾನ್ ಸಿನಿಮಾ ರೀತಿ ನನ್ನ ಗೆಲುವು ಆಗುತ್ತೆ ಎಂದಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಯ ಅಂಗಳದ ಮುಂದೆ ಆಟವಾಡುತ್ತಿದ್ದ ಮಗು ಚರಂಡಿಯಲ್ಲಿ ಮುಳುಗಿ ದಾರುಣ ಸಾವು

Sun Apr 30 , 2023
      ಮನೆ ಮುಂದೆ ಆಟವಾಡುತ್ತಿದ್ದ ಮಗು ಮನೆಯ ಮುಂಬಾಗ ತೆರದಿದ್ದ ಚರಂಡಿಗೆ ಬಿದ್ದು ಸಾವನ್ನಪ್ಪಿದೆ. ಘಟನೆ ಕುರಿತು ಮಾಹಿತಿ ನೀಡುತ್ತಿರುವ ಸ್ಥಳೀಯರುನೆಲಮಂಗಲ(ಬೆ.ಗ್ರಾಮಾಂತರ) : ನಗರದಲ್ಲಿ ಬೆಳಗ್ಗೆ ದುರಂತವೊಂದು ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ 11 ತಿಂಗಳ ಮಗು ಮನೆಯ ಮುಂಭಾಗದಲ್ಲಿದ್ದ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ರ್ದುಘಟನೆ ತಾಲೂಕಿನ ಸೋಂಪುರ ಹೋಬಳಿಯ ನಿಡವಂದ ಕಾಲೋನಿಯಲ್ಲಿ ನಡೆದಿದೆ. ಘಟನೆ ವಿವರ: ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಮನೆಯ ಅಂಗಳದಲ್ಲಿ ಮಗು ಆಟವಾಡಿ, […]

Advertisement

Wordpress Social Share Plugin powered by Ultimatelysocial