ಕಾಲಿನ ಮೂಳೆ ಮುರಿದುಕೊಂಡ ಸ್ಟಾರ್ ಕಲಾವಿದರು !
ತುಳು ಚಿತ್ರರಂಗಕ್ಕೆ ಯಾರ ಶಾಪವೋ? ಯಾರ ಕಣ್ಣು ಬಿತ್ತೋ ?
ಕರಿ ಹೈದ ಕರಿ #ಅಜ್ಜ.. #ಸಿನಿಮಾ ಬಾಕಿ ?
ಕರಿಹೈದ ಕರಿ ಅಜ್ಜ ಸಿನಿಮಾ ಶೂಟಿಂಗ್ ಮಡಂತ್ಯಾರಿನಲ್ಲಿ ನಡೆಯುತ್ತಿದ್ದ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಎಣ್ಣೆಯ ಪಸೆಯಿಂದಾಗಿ ಜಾರಿ ಬಿದ್ದು ತೊಡೆಯ ಮೂಳೆ ಮುರಿದು 2 ತಿಂಗಳಿಂದ ಬೆಡ್ ರಸ್ಟ್ನಲ್ಲಿರುವ ನವೀನ್ ಪಡೀಲ್…
ಇನ್ನೊಂದೆಡೆ ಜ.30ರಂದು ಸ್ಕೂಟರ್ ಸ್ಕಿಡ್ ಆಗಿ ಜಾರಿ ಬಿದ್ದು ಕಾಲಿನ ಮೂಳೆ ಮುರಿದುಕೊಂಡು ಅರವಿಂದ ಬೋಳಾರ್ ಹಾಸಿಗೆ ಮೇಲೆ… ಇಬ್ಬರ ಕೈಯಲ್ಲೂ ಸಿನಿಮಾಗಳಿವೆ !
ಬ್ಲಾಕ್ ಬಸ್ಟರ್ ಚಿತ್ರ #ಕಾಂತಾರ ಸಿನಿಮಾದಲ್ಲಿ ಪಡೀಲ್ ಪಾತ್ರ ಮಾಡಿದ್ದರು.
*ಈ ಇಬ್ಬರು ನಂ.1 ಕಲಾವಿದರು ಜಾರಿ ಬೀಳಲು ಕಾರಣ ಏನು ? *
ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮನೆಯೊಳಗೆ ಕಾಲು ಮುರಿದುಕೊಂಡು ಬಿದ್ದಿರಬೇಕು ಎಂದು ವಿಭಿನ್ನವಾಗಿ ಆಶೀರ್ವಾದ ಮಾಡುವ ಕ್ರಮ ಇದೆ. #ಶ್ರೀಮಂತಿಕೆ ಬರಲಿ ಎಂಬ ಆಶಯ.
ಆದರೆ ಇದೀತ ತುಳು ಚಿತ್ರರಂಗ, ನಾಟಕರಂಗದಲ್ಲಿ ಕಲಾಮಾತೆ ಸರಸ್ವತಿ ಕಾಲು ಮುರಿದುಕೊಂಡು ಬಿದ್ದಂತಾಗಿದೆ.
(ಇನ್ನೊಬ್ಬ ಕಲಾವಿದ ಅದೃಷ್ಟ ಲಕ್ಷಿ ಬೆತ್ತಲು ಮಾಡಿದ್ರೆ ಮನೆ ಒಳಗೆ ಇರ್ತಾಳೆ ಅಂತ ಅವರ ಚಿಂತನಾ ಮಟ್ಟದಲ್ಲಿ ಹೇಳಿಕೆ ಕೊಟ್ರು. ಅದಿಲ್ಲಿ ಬೇಡ ಬಿಡಿ..)
ತುಳು ರಂಗಭೂಮಿಯ ಇಬ್ಬರು ಅದ್ಭುತ ಕಲಾವಿದರಾದ #ನವೀನ್ ಡಿ. ಪಡೀಲ್ ಮತ್ತು #ಅರವಿಂದ ಬೋಳಾರ್ ಇಬ್ಬರೂ ಈಗ ನಡೆಯಲಾಗದೆ ಹಾಸಿಗೆಯಲ್ಲಿ ಇದ್ದಾರೆ. ಕಲಾ ಮಾತೆ ಸರಸ್ವತಿಯ ಪ್ರತಿರೂಪದಂತಿರುವ ತುಳು ನಾಡಿನ ಹಾಸ್ಯ ದಿಗ್ಗಜ ಜೋಡಿಗಳ ಮೇಲೆ ಕಣ್ಣು ಬಿದ್ದಿದೆ. ಸಿನಿಮಾ ರಂಗಕ್ಕೆ ಗರ ಬಡಿದಂತಾಗಿದೆ. ಗಾರೆಯ ಕೂಲಿ ಕಾರ್ಮಿಕನಾಗಿ ಕಡು ಕಷ್ಟದಿಂದ ಮೇಲೆದ್ದು ಬಂದ ಪಡೀಲ್ ತಾರ ಪಟ್ಟ ಪಡೆದಿರುವ ಹಿಂದೆ ಅನೇಕ ತ್ಯಾಗ,ನೋವಿನ ಕಥೆಗಳಿವೆ. ಕುಕ್ಕುರುಗಾಲಲ್ಲಿ ನಿಂತೂ ನಿಂತು, ತೀವ್ರಜ್ವರದಲ್ಲಿ ನಾಟಕ ಆಡಿದ ನಟನೆ ಸೈಡ್ ಇಫೆಕ್ಟ್ ನಿಂದಾಗಿ ತಂದೆಯಾಗುವ ಅರ್ಹತೆಯನ್ನೇ ಕಳೆದುಕೊಂಡ ಪಡೀಲ್ ಅವರ ಕಥೆಯಾದರೆ…
ಬೋಳಾರ್ ಬದುಕು ಕೂಡಾ ಕಡು ಕಷ್ಟದ್ದೇ .. ಅವರು ತಂದೆಯ ಮುಖವನ್ನೇ ನೋಡಿರಲಿಲ್ಲ. ತಾಯಿಯೇ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡಿ, ಮನೆ ಮನೆಯಲ್ಲಿ ಬಟ್ಟೆ, ಪಾತ್ರೆ ತೊಳೆದು ಮಕ್ಕಳನ್ನು ಸಾಕಿ ಬೆಳೆಸಿದ್ರು. ಈಗ ಸ್ಟಾರ್ ಆಗಿ ಬೆಳೆದಿದ್ದಾರೆ.
ಇತ್ತೀಚೆಗೆ ಬೋಳಾರ್ ಮೇಲೆ ಜ್ಯೋತಿಷಿಗಳ ವಿಡಂಬನೆ ಮತ್ತು #ಯಕ್ಷಗಾನದಲ್ಲಿ #ಬ್ರಾಹ್ಮಣ ಪಾತ್ರದ ಅವಹೇಳನ ಆಗಿದೆ ಎಂಬ ವಿವಾದವಾಗಿತ್ತು, ಆದರೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು.
ತುಳು ನಾಟಕದಲ್ಲಿ ಪಡೀಲ್ ಒಂಜಿ ಮುಟ್ಟು ಬೋಳಾರ್ ಡ್ದ್ ಎತ್ತರ, ತುಳು ಕಾಮಿಡಿ ಸಿನಿಮೊಡು ಬೋಳಾರ್.. ಪಡೀಲ್ ಡ್ದು ಒಂಜಿ ಮುಟ್ಲು ಎತ್ತರ… ( ನಾಟಕದಲ್ಲಿ ಪಡೀಲ್ ನಂ.1, ತುಳು ಕಾಮಿಡಿ ಸಿನಿಮಾದಲ್ಲಿ ಬೋಳಾರ್ ನಂ.1.)
ನಂಬರ್ ವನ್ #ಕಲಾವಿದರು ಬಹು ಬೇಡಿಕೆಯಲ್ಲಿದ್ದಾಗಲೇ ಕಾಲಿನ ಮೂಳೆ ಮುರಿದುಕೊಂಡು ಮನೆಯಲ್ಲಿರುವ ಪರಿಸ್ಥಿತಿ ಎದುರಾಗಿದೆ. ತುಳು ಸಿನಿಮಾ ರಂಗದಲ್ಲಿ ದಾಖಲೆ ಮೇಲೆ ದಾಖಲೆ ಮಾಡಿದ ವಿಜಯಕುಮಾರ್ ಕೊಡಿಯಾಲ ಬೈಲ್ ಅವರ ಒರಿಯಡ್ದ್ ಒರಿ ಅಸಲ್ ಮತ್ತು ಪ್ರಕಾಶ್ ಪಾಂಡೇಶ್ವರ ಅವರ ಚಾಲಿಪೋಲಿಲು ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿ ಜನಪ್ರಿಯತೆ ಉತ್ತುಂಗಕ್ಕೇರಿದವರು.
#ದೈವಗಳ ಸಿನಿಮಾ ಮಾಡುವ ಕುರಿತು ಜತೆಗೆ ಕರಿಹೈದ #ಸಿನಿಮಾ ಟೈಟಲ್ ಕುರಿತು ಬಹಳ ಆಕ್ಷೇಪಗಳು ಕೇಳಿ ಬಂದಿತ್ತು. ಸಿನಿಮಾದಲ್ಲಿ #ಶೃತಿ, #ಭವ್ಯಾ ಮಾತ್ರವಲ್ಲದೆ ಹಾಲಿವುಡ್ ನಟ ಕೂಡಾ ಇದ್ದಾರಂತೆ. ಪವಾಡಗಳು ನಡೆಯಿತು ಎಂದು ನಟರುಗಳೇ ಹೇಳಿಕೊಂಡಿದ್ದಾರೆ.
ಇದೀಗ ಪ್ರಧಾನ ಪಾತ್ರಧಾರಿ #ಪಡೀಲ್ ಬೆಡ್ ರೆಸ್ಟ್ ನಿಂದಾಗಿ ಸಿನಿಮಾ ಕೂಡಾ ರೆಸ್ಟ್ ನಲ್ಲಿದೆ. ಸದ್ಯಕ್ಕೆ ಪಡೀಲ್ ಅವರು ಊರುಗೋಲು ಹಿಡಿದುಕೊಂಡು ನಡೆದಾಡಲು ಆರಂಭಿಸಿದ್ದಾರೆ.
#ಬೋಳಾರ್ ಅವರು #ಅರ್ಜುನ್ #ಕಾಪಿಕಾಡ್ ನಿರ್ದೇಶನದ ಹೆಸರು ಇಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಹಾಡಿನ #ಚಿತ್ರೀಕರಣ ಬಾಕಿ ಇದೆ. ಮೊಣಕಾಲಿನ ಬಳಿ ಮೂಳೆಯಲ್ಲಿ ಕ್ರ್ಯಾಕ್ ಬಂದಿದ್ದು, #ಆಪರೇಶನ್ ಕೂಡಾ ಮಾಡಲಾಗಿದೆ. ಒಂದು ತಿಂಗಳ ವಿಶ್ರಾಂತಿ ಪಡೆಯುವಂತೆ ಡಾಕ್ಟ್ರು ಹೇಳಿದ್ದಾರೆ. ವಾರದೊಳಗೆ ನಾನು ಸಿದ್ದ ಎಂದು ಬೋಳಾರ್ ಹೇಳಿದ್ದಾರೆ.. ಇಬ್ರೂ ಗುಣಮುಖರಾಗುವವರೆಗೆ ಸಿನಿಮಾ ತಂಡ ಕಾಯಬೇಕಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada