ಜಿಲ್ಲೆಯ ಹಲವಡೆ ರಾತ್ರಿಯಿಡೀ ಸುರಿದ ಮಹಾಮಳೆಗೆ ಜನತೆ ಬೆಚ್ಚಿಬೀಳುವಂತೆ ಆಗಿದೆ. ಭಾರಿ ಮಳೆಯ ಪರಿಣಾಮ ಚಿತ್ರದುರ್ಗ ನಗರದ ಬಹುತೇಕ ರಸ್ತೆಗಳು ಆವೃತವಾಗಿವೆ. ನಿರಂತರ ಮಳೆಯಿಂದಾಗಿ ಹೊಳಲ್ಕೆರೆ-ಚಿತ್ರದುರ್ಗ ಹೆದ್ದಾರಿಯಲ್ಲಿ ನೀರು ತುಂಬಿ ಹಲವು ದ್ವಿಚಕ್ರ ವಾಹನಗಳು ಮುಳುಗಡೆಯಾಗಿದ್ದವು. ಮತ್ತೊಂದೆಡೆ ನದಿಯಂತೆ ಹರಿಯುತ್ತಿದ್ದ ನೀರಿನಲ್ಲೇ ವಾಹನ ಚಲಾಯಿಸಿ ಚಾಲಕರು ಸಾಹಸ ಪ್ರದರ್ಶಿಸಿದ್ರು. ನಿರಂತರ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಹಲವೆಡೆ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಮಲ್ಲಾಪುರ […]