ಜಿಲ್ಲೆಯ ಹಲವಡೆ ರಾತ್ರಿಯಿಡೀ ಸುರಿದ ಮಹಾಮಳೆಗೆ ಜನತೆ ಬೆಚ್ಚಿಬೀಳುವಂತೆ ಆಗಿದೆ. ಭಾರಿ ಮಳೆಯ ಪರಿಣಾಮ ಚಿತ್ರದುರ್ಗ ನಗರದ ಬಹುತೇಕ ರಸ್ತೆಗಳು ಆವೃತವಾಗಿವೆ. ನಿರಂತರ ಮಳೆಯಿಂದಾಗಿ ಹೊಳಲ್ಕೆರೆ-ಚಿತ್ರದುರ್ಗ ಹೆದ್ದಾರಿಯಲ್ಲಿ ನೀರು ತುಂಬಿ ಹಲವು ದ್ವಿಚಕ್ರ ವಾಹನಗಳು ಮುಳುಗಡೆಯಾಗಿದ್ದವು. ಮತ್ತೊಂದೆಡೆ ನದಿಯಂತೆ ಹರಿಯುತ್ತಿದ್ದ ನೀರಿನಲ್ಲೇ ವಾಹನ ಚಲಾಯಿಸಿ ಚಾಲಕರು ಸಾಹಸ ಪ್ರದರ್ಶಿಸಿದ್ರು. ನಿರಂತರ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಹಲವೆಡೆ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಮಲ್ಲಾಪುರ ಕೆರೆಯು ಸತತ ಮೂರನೇ ಬಾರಿಯೂ ಕೋಡಿ ಬಿದ್ದು ಉಕ್ಕಿ ಹರಿಯುತ್ತಿದೆ. ಚಿತ್ರದುರ್ಗ ಹೊಸದುರ್ಗ ಹೊಳಲ್ಕೆರೆ, ರಾಮಗಿರಿ ಚಳ್ಳಕೆರೆ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ.
ಚಿತ್ರದುರ್ಗದಲ್ಲಿ ಭರ್ಜರಿ ಮಳೆ
Please follow and like us: