ಚಿತ್ರದುರ್ಗದಲ್ಲಿ ಭರ್ಜರಿ ಮಳೆ

ಜಿಲ್ಲೆಯ ಹಲವಡೆ ರಾತ್ರಿಯಿಡೀ ಸುರಿದ ಮಹಾಮಳೆಗೆ ಜನತೆ ಬೆಚ್ಚಿಬೀಳುವಂತೆ ಆಗಿದೆ. ಭಾರಿ ಮಳೆಯ ಪರಿಣಾಮ ಚಿತ್ರದುರ್ಗ ನಗರದ ಬಹುತೇಕ ರಸ್ತೆಗಳು ಆವೃತವಾಗಿವೆ. ನಿರಂತರ ಮಳೆಯಿಂದಾಗಿ ಹೊಳಲ್ಕೆರೆ-ಚಿತ್ರದುರ್ಗ ಹೆದ್ದಾರಿಯಲ್ಲಿ ನೀರು ತುಂಬಿ ಹಲವು ದ್ವಿಚಕ್ರ ವಾಹನಗಳು ಮುಳುಗಡೆಯಾಗಿದ್ದವು. ಮತ್ತೊಂದೆಡೆ ನದಿಯಂತೆ ಹರಿಯುತ್ತಿದ್ದ ನೀರಿನಲ್ಲೇ ವಾಹನ ಚಲಾಯಿಸಿ ಚಾಲಕರು ಸಾಹಸ ಪ್ರದರ್ಶಿಸಿದ್ರು. ನಿರಂತರ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಹಲವೆಡೆ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಮಲ್ಲಾಪುರ ಕೆರೆಯು ಸತತ ಮೂರನೇ ಬಾರಿಯೂ ಕೋಡಿ ಬಿದ್ದು ಉಕ್ಕಿ ಹರಿಯುತ್ತಿದೆ. ಚಿತ್ರದುರ್ಗ ಹೊಸದುರ್ಗ ಹೊಳಲ್ಕೆರೆ, ರಾಮಗಿರಿ ಚಳ್ಳಕೆರೆ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಚಿತ್ರರಂಗಕ್ಕೆ ಮತ್ತೊಂದು ಬಿಗ್ ಶಾಕ್

Thu Jul 30 , 2020
ಇತ್ತಿಚಿಗೆ ಚಿತ್ರರಂಗದಲ್ಲಿ ಆತ್ಮಹತ್ಯೆಯ ಪ್ರಕರಣ ಹೆಚ್ಚಾಗುತ್ತಿದ್ದು, ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶುತೋಷ್‌ಗೆ ೩೨ ವರ್ಷ ವಯಸ್ಸಾಗಿದ್ದು,ಮಹಾರಾಷ್ಟçದ ನಾಂದೇಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪೊಲೀಸರ ಪ್ರಕಾರ, ಅಶುತೋಷ್ ಒಂದು ತಿಂಗಳು ಹಿಂದೆಯಷ್ಟೆ ನಾದೇಡ್‌ಗೆ ಬಂದಿದ್ದರು. ಅಶುತೋಷ್ ಶವ ಅವರ ಬಂಗಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜನವರಿ ೨೧,೨೦೧೬ ರಲ್ಲಿ ಅಶುತೋಷ್ ಮತ್ತು ಮಯೂರಿ ದೇಶ್ಮುಖ್ ವಿವಾಹವಾಗಿದ್ದು,ಇಬ್ಬರ ಮಧ್ಯೆ ಸಂಬoಧ ಚೆನ್ನಾಗಿಯೇ ಇತ್ತು ಎನ್ನಲಾಗಿದೆ.ಇಲ್ಲಿಯವರೆಗೂ […]

Advertisement

Wordpress Social Share Plugin powered by Ultimatelysocial