ಗದ್ದೆಯಲ್ಲಿ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕುಟುಂಬಕ್ಕೆ ಕೊರೊನಾ ವಕ್ಕರಿಸಿ ಮನೆಯವರೆಲ್ಲಾ ಕೋವಿಡ್ ಆಸ್ಪತ್ರೆ ಸೇರಿದರು. ಆದರೆ ಗದ್ದೆ ಮಾತ್ರ ಪಾಳು ಬೀಳಲಿಲ್ಲ ತಾಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದ ಬಡ ಕುಟುಂಬಕ್ಕೆ ಸೇರಿದ ಅರ್ಧಕ್ಕೆ ನಿಂತಿದ್ದ ನಾಟಿ ಕಾರ್ಯವನ್ನು ಗ್ರಾಮಸ್ಥರೆಲ್ಲ ಸೇರಿ ಮುಗಿಸಿ ನೆರವಾಗಿದ್ದಾರೆ. ಮಾನವೀಯತೆ ಗ್ರಾಮೀಣ ಭಾಗದಲ್ಲಿ ಈಗಲೂ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ತಲ್ತಾರೆಶೆಟ್ಟಳ್ಳಿ ಗ್ರಾಮದ ಪುಟ್ಟಯ್ಯಗೆ ೨ ಎಕರೆ ಗದ್ದೆ ಇದ್ದು, ಪ್ರತಿವರ್ಷ ಭತ್ತ ಬೆಳೆದು ಕುಟುಂಬ ನಿರ್ವಹಣೆ […]