ದೇವದುರ್ಗ ತಾಲೂಕಿನ ಜೀವನಾಡಿಯಾದ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ (ಎನ್.ಆರ್.ಬಿ.ಸಿ) ಆಧುನೀಕರಣ ಕಾಮಗಾರಿ ಬರದಿಂದ ಸಾಗಿದೆ. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಹಲವಾರು ಅನುಮಾನ ಮೂಡುವಂತಾಗಿದೆ. ಯಾವುದೇ ಇಲಾಖೆಯ ನಿರ್ವಹಣೆಯಲ್ಲಿ ಕಾಮಗಾರಿ ನಡೆದರೆ ಅಧಿಕಾರಿಗಳು ಹಾಜರಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಆದರೆ ಒಂದು ಸಾವಿರ ಕೋಟಿ ವೆಚ್ಚದ ಕಾಮಗಾರಿ ನಡೆದಿದ್ದರೂ ಅಧಿಕಾರಿಗಳು ಈ ಕಡೆ ಸುಳಿಯುತ್ತಿಲ್ಲ. ಅನೇಕ ಬಾರಿ ಮುಖ್ಯ ಕಾಲುವೆ ಹೊಡೆದು ಸಾವಿರಾರು ಎಕೆರೆ ಪ್ರದೇಶದಲ್ಲಿ ಬೆಳೆ […]