ದೇವದುರ್ಗ ತಾಲೂಕಿನ ಜೀವನಾಡಿಯಾದ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ (ಎನ್.ಆರ್.ಬಿ.ಸಿ) ಆಧುನೀಕರಣ ಕಾಮಗಾರಿ ಬರದಿಂದ ಸಾಗಿದೆ. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಹಲವಾರು ಅನುಮಾನ ಮೂಡುವಂತಾಗಿದೆ. ಯಾವುದೇ ಇಲಾಖೆಯ ನಿರ್ವಹಣೆಯಲ್ಲಿ ಕಾಮಗಾರಿ ನಡೆದರೆ ಅಧಿಕಾರಿಗಳು ಹಾಜರಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಆದರೆ ಒಂದು ಸಾವಿರ ಕೋಟಿ ವೆಚ್ಚದ ಕಾಮಗಾರಿ ನಡೆದಿದ್ದರೂ ಅಧಿಕಾರಿಗಳು ಈ ಕಡೆ ಸುಳಿಯುತ್ತಿಲ್ಲ. ಅನೇಕ ಬಾರಿ ಮುಖ್ಯ ಕಾಲುವೆ ಹೊಡೆದು ಸಾವಿರಾರು ಎಕೆರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇಂತಹ ಸ್ಥಿತಿಯಲ್ಲಿ ಕಾಲುವೆಯ ಆಧುನಿಕರಣ ಮಾಡುವಂತೆ ಅನೇಕ ಬಾರಿ ವಿವಿಧ ಸಂಘಟನೆಗಳ ಹೋರಾಟ ಫಲವಾಗಿ ಪ್ರಸ್ತಕ ವರ್ಷ ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಬ್ಲಾಕ್ ವರ್ಕ್ ಇರುವ ಕಡೆ ಕಳಪೆ ಗುಣಮಟ್ಟದ ಕಬ್ಬಿಣದ ಕಂಬಿಗಳನ್ನು ಬಳಸಿ ಸಿಮೆಂಟ್ ಕಾಂಕ್ರೀಟ್ ಮಾಡಲಾಗುತ್ತಿದೆ ಎನ್ನುವ ಆರೋಪವು ಶುರುವಾಗಿದೆ.
ಕಾಲುವೆ ಕಾಂಕ್ರೀಟ್ ಕಾಮಗಾರಿ ಕಳಪೆ
Please follow and like us: