ಪೊಲೀಸರಿಗೆ ಗಾಂಜಾ ಸುಳಿವು ಕೊಟ್ಟನೆಂದು ಗಾಂಜಾ ಗ್ಯಾಂಗ್ ಒಂದು ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ನಗರದ ಬಸವೇಶ್ವರನಗರ ನಿವಾಸಿಗಳಾದ ಅಂಬರೀಶ, ವಿರೇಶ್, ಪ್ರಶಾಂತ್ ಸೇರಿದಂತೆ 15 ಹುಡುಗರು ಗ್ಯಾಂಗ್ ಸಮೇತ ಬಂದು ದೇವಸ್ಥಾನದ ಕಟ್ಟಡ ಕೆಲಸ ಮಾಡುತ್ತಿದ್ದ ಗೋವಿಂದರಾಜ್ ಎಂಬ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪರಾರಿಯಾಗಿದ್ದು ಅಲ್ಲದೇ ಈ ಗಾಂಜಾ ಗ್ಯಾಂಗ್ ನಿಂದ ಬಸವೇಶ್ವರನಗರದ ನಿವಾಸಿಗಳು ಬೇಸತ್ತುಹೋಗಿದ್ದಾರೆ. […]