ಗಾಂಜಾ ಗ್ಯಾಂಗ್ ನಿಂದ ಯುವಕನ ಮೇಲೆ ಹಲ್ಲೆ

ಪೊಲೀಸರಿಗೆ ಗಾಂಜಾ ಸುಳಿವು ಕೊಟ್ಟನೆಂದು ಗಾಂಜಾ ಗ್ಯಾಂಗ್ ಒಂದು ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ  ನಗರದ ಬಸವೇಶ್ವರನಗರ ನಿವಾಸಿಗಳಾದ  ಅಂಬರೀಶ,  ವಿರೇಶ್, ಪ್ರಶಾಂತ್  ಸೇರಿದಂತೆ 15  ಹುಡುಗರು ಗ್ಯಾಂಗ್ ಸಮೇತ ಬಂದು ದೇವಸ್ಥಾನದ ಕಟ್ಟಡ ಕೆಲಸ ಮಾಡುತ್ತಿದ್ದ ಗೋವಿಂದರಾಜ್ ಎಂಬ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪರಾರಿಯಾಗಿದ್ದು ಅಲ್ಲದೇ ಈ ಗಾಂಜಾ ಗ್ಯಾಂಗ್ ನಿಂದ ಬಸವೇಶ್ವರನಗರದ ನಿವಾಸಿಗಳು ಬೇಸತ್ತುಹೋಗಿದ್ದಾರೆ. ಕೆಲಸಕ್ಕೆ  ಹೋಗದ ಈ ಹುಡುಗರು ಕಳ್ಳತನ, ಹುಡುಗಿಯರನ್ನ ಚುಡಾಯಿಸುವುದು, ಗಾಂಜಾ ಸೇದಿಕೊಡು ಬಂದು ಮಧ್ಯರಾತ್ರಿ ಏರಿಯಾದಲ್ಲಿ ಪಟಾಕಿ ಹೊಡೆದು ನಗರದ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದರು. ಆದಕಾರಣ ಆರೋಪಿಗಳ ಬಂಧನಕ್ಕಾಗಿ ದೊಡ್ಡಬಳ್ಳಾಪುರ  ನಗರ ಪೊಲೀಸ್ ಠಾಣೆ ಮುಂದೆ  ಜನರು ಪ್ರತಿಭಟನೆ  ನಡೆಸಿದರು.

Please follow and like us:

Leave a Reply

Your email address will not be published. Required fields are marked *

Next Post

ನಾಸಾದ ಮಾನವಸಹಿತ ಬಾಹ್ಯಾಕಾಶಯಾನ ಯಶಸ್ವಿ

Mon Aug 3 , 2020
ಅಮೆರಿಕಾದ ಖಾಸಗಿ ರಾಕೆಟ್ ಕಂಪನಿಯಾದ ಸ್ಪೇಸ್‌ಎಕ್ಸ್ ಹಮ್ಮಿಕೊಂಡಿದ್ದ ಮಾನವಸಹಿತ ಬಾಹ್ಯಾಕಾಶಯಾನ ಯಶಸ್ವಿಯಾಗಿದೆ, ಗಗನ ಯಾತ್ರಿಗಳಾದ ರಾಬರ್ಟ್ ಬೆಹೆನ್ಕನ್ ಹಾಗೂ ಡೌಗ್ಲಾಸ್ ಹರ್ಲೀ ಸುರಕ್ಷಿತವಾಗಿ ಮೆಕ್ಕಿಕೊ ಗಲ್ಫ್ನಲ್ಲಿ ಇಳಿದಿದ್ದಾರೆ. 1975ರ ಬಳಿಕ ಇದೇ ಮೊದಲ ಬಾರಿಗೆ ನಾಸಾ ಗಗನಯಾತ್ರಿಗಳು ಸಮುದ್ರದಲ್ಲಿ ಲ್ಯಾಂಡಿoಗ್ ಆಗಿದ್ದಾರೆ. ಮೇ 31ರಂದು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು”ಸ್ಪೇಸ್ ಎಕ್ಸ್ ಡೆಮೋ-2ಮಿಷನ್ ಎನ್ನುವ ಮಾನವಸಹಿತ ಗಗನಯಾನ ಯೋಜನೆ ಇದಾಗಿದೆ”. ಈ ಕುರಿತು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ […]

Advertisement

Wordpress Social Share Plugin powered by Ultimatelysocial