ನಿತ್ಯ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಆರೋಗ್ಯ ಸುಧಾರಣೆಗೆ ಉಪಕಾರಿ. ಅದರೊಂದಿಗೆ ಕರಿಬೇವಿನ ಕಷಾಯ ಮಾಡಿ ನಿತ್ಯ ಮಕ್ಕಳಿಗೆ ಕುಡಿಯಲು ಕೊಟ್ಟರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. ನುಗ್ಗೆ ಸೊಪ್ಪಿನ ಪಲ್ಯ, ಸಾಂಬಾರ ಮಾಡಿಕೊಂಡು ತಿನ್ನಿ. ಹಾಗೇನೇ ನುಗ್ಗೆ ಸೊಪ್ಪಿನ ಕಷಾಯ ಮಾಡಿಕೊಂಡು ಕುಡಿಯಿರಿ. ಸಬ್ಬಸ್ಸಿಗೆ ಸೊಪ್ಪನ್ನು ಆಹಾರದಲ್ಲಿ ಸೇವಿಸುವುದರಿಂದ ಉತ್ತಮ ದೃಷ್ಟಿ ಪಡೆಯಬಹುದು. ಪುದೀನಾ ಸೊಪ್ಪಿನ ಕಷಾಯ, ಪುಂಡಿ ಸೊಪ್ಪಿನ ಚಟ್ನಿಯಿಂದ ದೃಷ್ಟಿ ಹೆಚ್ಚುವುದರೊಂದಿಗೆ ಹೆಣ್ಣು ಮಕ್ಕಳ […]