ಕೆಎಸ್ಆರ್ಟಿಸಿ ನೌಕರರಿಗೆ ಹೆಚ್ಚಿಸಬೇಕಾಗಿದ್ದ ತುಟ್ಟಿಭತ್ಯೆ ಹೆಚ್ಚಳವನ್ನ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ತಡೆಹಿಡಿದಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ನೌಕರರ ಭತ್ಯೆಯನ್ನ ಹೆಚ್ಚಿಸಬೇಕಾಗಿತ್ತು ಆದರೆ ಕೊರೊನಾ ಕಾರಣದಿಂದಾಗಿ ಈಗಾಗಲೇ ನಷ್ಟದಲ್ಲಿರುವ ಕೆಎಸ್ಆರ್ಟಿಸಿ ಭತ್ಯೆಯನ್ನ ಹೆಚ್ಚಿಸಲಾಗುವುದಿಲ್ಲಮತ್ತು ೨೦೨೧ರ ಜನವರಿಯಲ್ಲಿ ಹೆಚ್ಚಿಸಬೇಕಾಗಿದ್ದ ತುಟ್ಟಿಭತ್ಯೆ ದರವನ್ನು ತಡೆಹಿಡಿಯಲಾಗಿದೆ ಎಂದು ಸ್ಪಷ್ಟನೆಯನ್ನ ನೀಡಿದೆ.