ಕಳೆದ ವರ್ಷ ಪಶ್ಚಿಮಘಟ್ಟದ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಹಲವೆಡೆ ಗುಡ್ಡ ಕುಸಿದು ಅಪಾರ ಹಾನಿ ಸಂಭವಿಸಿತ್ತು. ಈ ಬಾರಿ ಅದೇ ಪರ್ವತ ಶ್ರೇಣಿಯ ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಬಂಡೆ ಸಮೇತ ಗುಡ್ಡ ಕುಸಿದಿದೆ.ದಿಡುಪೆ ಹೆಬ್ಬಾರ್ತಿಕಲ್ ಗುಡ್ಡದಲ್ಲಿ ಬಂಡೆ ಉರುಳಿದ ಸದ್ದು ನಾಲ್ಕೈದು ಕಿ.ಮೀ. ದೂರದ ಮಲವಂತಿಗೆ ಗ್ರಾಮಕ್ಕೆ ಕೇಳಿಸಿದ್ದು, ಮನೆಯಿಂದ ಹೊರಬಂದು ನೋಡಿದಾಗ ಹೊಗೆಯಾಡಿದ ವಾತಾವರಣ ಕಂಡಿದೆ. ಇಲ್ಲಿ ೧೦ಕ್ಕೂ ಅಧಿಕ ಮನೆಗಳಿವೆ.೮ ದಿನಗಳಿಂದ ಘಾಟ್ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, […]