ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಲಾಕ್ ಡೌನ್ ಹೊಡೆತದಿಂದಾಗಿ ನೇಕಾರರು ತೀವ್ರ ಸಂಕಷ್ಟಕ್ಕೀಡಾಗಿದ್ದು, ರಾಜ್ಯಸರ್ಕಾರ ನೆರವು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ನೇಕಾರರ ಹೋರಾಟ ಖಚಿತ ಎಂದು ನಗರದ ವಿದ್ಯಾನಗರದ ಸರ್ಕಾರಿ ಶಾಲಾವರಣದಲ್ಲಿ ನಡೆದ ನೇಕಾರರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಎಂ.ಡಿ ಲಕ್ಷ್ಮೀನಾರಾಯಣ್ ಹೇಳಿದರು. ಬೇರೆ ಸಮುದಾಯಗಳಿಗೆ 5ಸಾವಿರ ಪರಿಹಾರಧನ ನೀಡುತ್ತಿರುವ ಸರ್ಕಾರ ನೇಕಾರರಿಗೆ ಮಾತ್ರ ಕೇವಲ 2ಸಾವಿರ ನೀಡುತ್ತಿದೆ. ಆದರೆ […]