ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕ-ಪ್ರದರ್ಶಕರಾಗಿ ಗುರುತಿಸಿಕೊಂಡವರು. ಡಾ. ವಿಷ್ಣುವರ್ಧನ್ ಅಭಿನಯದ ‘ಸೂರ್ಯವಂಶ’, ಶಿವರಾಜಕುಮಾರ್ ಅಭಿನಯದ ‘ಗಲಾಟೆ ಅಳಿಯಂದ್ರು’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದರು. ಈಗ ಅವರ ಮಗ ನಿಖಿಲ್ ಸಹ ಅಪ್ಪನ ಹಾದಿಯಲ್ಲೇ ನಡೆದಿದ್ದಾರೆ. ಈಗಾಗಲೇ ‘ಜಾಗ್ವಾರ್’, ‘ಕುರುಕ್ಷೇತ್ರ’, ‘ಸೀತಾರಾಮ ಕಲ್ಯಾಣ’ ಚಿತ್ರಗಳಲ್ಲಿ ನಟಿಸಿರುವ ನಿಖಿಲ್, ಇದೀಗ ನಿರ್ಮಾಪಕರಾಗುತ್ತಿದ್ದಾರೆ. ಸಾದ್ ಖಾನ್ ನಿರ್ದೇಶನದಲ್ಲಿ ಇದೀಗ ‘ಸಂಗೀತ್’ ಎಂಬ ಚಿತ್ರವನ್ನು ನಿರ್ಮಿಸುವತ್ತ […]