ಕೊರೊನಾ ಸೇನಾನಿಗಳಾದ ಆಶಾಕಾರ್ಯಕರ್ತೆಯರು ಹಗಲಿರುಳು ಎನ್ನದೆ ಕೊರೊನಾ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದಾರೆ. ಆದರೆ ಸರ್ಕಾರ ಇವರತ್ತ ಗಮನ ಕೊಡದೆ ಸಹಾಯಧನ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಸರ್ಕಾರ 21 ಸಾವಿರ ಆಶಾಕಾರ್ಯಕರ್ತೆಯರಿಗೆ, ತಲಾ ಮೂರು ಸಾವಿರ ಪ್ರೋತ್ಸಾಹ ಧನ ನೀಡಿದೆ. ಇನ್ನು 15 ದಿನಗಳಲ್ಲಿ ಉಳಿದ ಕಾರ್ಯಕರ್ತೆಯರಿಗೆ ಹಣ ವಿತರಣೆ ಮಾಡುತ್ತೇವೆ ಎಂದು ಹೇಳಿದರು.  

Advertisement

Wordpress Social Share Plugin powered by Ultimatelysocial