ಕೊರೊನಾ ಸೇನಾನಿಗಳಾದ ಆಶಾಕಾರ್ಯಕರ್ತೆಯರು ಹಗಲಿರುಳು ಎನ್ನದೆ ಕೊರೊನಾ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದಾರೆ. ಆದರೆ ಸರ್ಕಾರ ಇವರತ್ತ ಗಮನ ಕೊಡದೆ ಸಹಾಯಧನ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಸರ್ಕಾರ 21 ಸಾವಿರ ಆಶಾಕಾರ್ಯಕರ್ತೆಯರಿಗೆ, ತಲಾ ಮೂರು ಸಾವಿರ ಪ್ರೋತ್ಸಾಹ ಧನ ನೀಡಿದೆ. ಇನ್ನು 15 ದಿನಗಳಲ್ಲಿ ಉಳಿದ ಕಾರ್ಯಕರ್ತೆಯರಿಗೆ ಹಣ ವಿತರಣೆ ಮಾಡುತ್ತೇವೆ ಎಂದು ಹೇಳಿದರು.