ವಿ.ಆರ್. ಭಾಸ್ಕರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ವಿಷ್ಣುವರ್ಧನ್ ನಟನೆಯ ಅನೇಕ ಸಿನಿಮಾಗಳಿಗೆ ಭಾಸ್ಕರ್ ಕೆಲಸ ಮಾಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಸೆಪ್ಟೆಂಬರ್ 14) ಮುಂಜಾನೆ ನಿಧನರಾದರು. ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.ಕನ್ನಡ ಚಿತ್ರರಂಗದಲ್ಲಿ (Sandalwood) ಗುರುತಿಸಿಕೊಂಡಿದ್ದ ನಿರ್ದೇಶಕ, ಸಂಭಾಷಣಕಾರ, ಗೀತ ಸಾಹಿತಿ ವಿ.ಆರ್. ಭಾಸ್ಕರ್ (V R Bhaskar) ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಮೈಸೂರಿನಲ್ಲಿ ಗುರುವಾರ (ಸೆ.14) ವಿಧಿವಶರಾಗಿದ್ದಾರೆ. […]