ದುನಿಯಾ ವಿಜಿ ಬರ್ತ್​ಡೇ! ತೆಲುಗು ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

ತೆಲುಗಿನ ವೀರಸಿಂಹ ರೆಡ್ಡಿ ಸಿನಿಮಾ ಸಖತ್ ಟ್ರೆಂಡಿಂಗ್ ಆಗಿದೆ. ಈ ಸಿನಿಮಾ ಕರ್ನಾಟಕದಲ್ಲಿಯೂ ಅದ್ಧೂರಿ ಪ್ರೀ ಬುಕ್ಕಿಂಗ್ ದಾಖಲೆ ಮಾಡಿದೆ. ಈಗಲೂ ಸಕ್ಸಸ್​ಫುಲ್ ಆಗಿ ಓಡುತ್ತಿದೆ. ಕಾರಣ ಏನು ಗೊತ್ತಾ? ಇದರಲ್ಲಿ ನಟ ವಿಜಯ್ ನಟಿಸಿದ್ದಾರೆ.

ಸ್ಯಾಂಡಲ್​ವುಡ್ ಕರಿಯ, ದುನಿಯಾ ವಿಜಯ್ ಈ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಭಾರೀ ಕ್ರೇಜ್ ಸೃಷ್ಟಿಸಿದ್ದಾರೆ. ಇನ್ನೊಂದು ರೇಂಜ್​ನಲ್ಲಿ ಮಿಂಚಿದ್ದಾರೆ.

ಇಂದು ನಟ ದುನಿಯಾ ವಿಜಯ್​​ಗೆ ಬರ್ತ್​ಡೇ ಸಂಭ್ರಮ. ನಟ 49 ವರ್ಷದ ಬರ್ತ್​ಡೇ ಸಂಭ್ರಮದಲ್ಲಿದ್ದಾರೆ. ಈ ವರ್ಷದ ಬರ್ತ್​ಡೇ ಸಂದರ್ಭದಲ್ಲಿ ನಟನಿಗೆ ಡಬಲ್ ಖುಷಿ ಇದೆ.

ದುನಿಯಾ ವಿಜಯ್ ತೆಲುಗು ಸಿನಿಮಾ ಸಖತ್ ಹವಾ ಮಾಡಿದ್ದು ಒಂದು ಖುಷಿಯಾದ್ರೆ, ಭೀಮಾ ಟೀಸರ್ ರಿಲೀಸ್ ಮತ್ತೊಂದು ಸಂಭ್ರಮ. ಹಾಗಾಗಿ ವಿಜಯ್​ಗೆ ಈ ಬರ್ತ್​ಡೇ ಸ್ಪೆಷಲ್. ತೆಲುಗು ಸಿನಿಮಾದಲ್ಲಿ ನಟಿಸೋಕೆ ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಬಾಲಯ್ಯ ಎದುರಾಗಿ ವಿಲನ್ ಪಾತ್ರ ಮಾಡೋದಂದ್ರೆ ಇದೊಂದು ಬಂಪರ್ ಅವಕಾಶವೇ ಸರಿ. ಇದಕ್ಕೆ ವಿಜಯ್ ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತೇ? ಟಾಲಿವುಡ್​ ಬಾಲಯ್ಯನ ದಿಲ್​ ಕದ್ದ ಕನ್ನಡದ ಹೀರೋ ವಿಜಯ್ ಅವರು ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎನ್ನುವ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾಗಾಗಿ ಕನ್ನಡದ ನಟ ದುನಿಯಾ ವಿಜಯ್ ಪಡೆದ ಸಂಭಾವನೆ ಬರೋಬ್ಬರಿ 1 ಕೋಟಿ ರೂಪಾಯಿ ಎಂದು  ಹೇಳಿದೆ.  ಇದೀಗ ವಿಜಯ್ ಅಭಿಮಾನಿಗಳೆಲ್ಲ ಭೀಮಾ ಟೀಸರ್​ಗಾಗಿ ಕುತೂಲದಿಂದ ಕಾಯುತ್ತಿದ್ದಾರೆ. ಅವರ ಸಿನಿಮಾ ಪ್ರೇಮಿಗಳು ಈ ಟೀಸರ್ ರಿಲೀಸ್ ಹಾಗೂ ಬರ್ತ್​ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಲು ಪ್ಲಾನ್ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ತವ್ಯ ನಿರತ ಸರ್ಕಲ್ ಇನ್ಸ್ಪೆಕ್ಟರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ.

Fri Jan 20 , 2023
ಮಾಜಿ ಕಾರ್ಪೋರೇಟರ್ ವಿ ಬಾಲಕೃಷ್ಣ ಬಂಧನ ವಾರ್ಡ್ ನಂಬರ್ 185 ಯಲಚೇನಹಳ್ಳಿ ವಾರ್ಡ್ ಮಾಜಿ ಕಾರ್ಪೋರೇಟರ್ ರಾಮನಗರ ಜಿಲ್ಲೆ ಕಗ್ಗಲೀಪುರ ಪೊಲೀಸರಿಂದ ಬಂಧನ ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು ನಿನ್ನೆ ಸಂಜೆ ಕಗ್ಗಲೀಪುರ ಠಾಣೆಗೆ ತೆರಳಿದ್ದ ಬಾಲಕೃಷ್ಣ ಇದೇ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿ ಕೊನೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ ಬಾಲಕೃಷ್ಣ ತಕ್ಷಣವೇ ಬಾಲಕೃಷ್ಣನ ವಶಕ್ಕೆ […]

Advertisement

Wordpress Social Share Plugin powered by Ultimatelysocial