ದೇಶವನ್ನೇ ನಡುಗಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಕಾರಣ ತುನೀಶಾ ಶರ್ಮಾ ಜೊತೆ ಬಲವಂತವಾಗಿ ಬೇರ್ಪಡಬೇಕಾಯಿತು ಎಂದು ಆರೋಪಿ ಶೀಜನ್ ಖಾನ್ ತಿಳಿಸಿದ್ದಾರೆ. ಮುಂಬೈ: ದೇಶವನ್ನೇ ನಡುಗಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಕಾರಣ ತುನೀಶಾ ಶರ್ಮಾ ಜೊತೆ ಬಲವಂತವಾಗಿ ಬೇರ್ಪಡಬೇಕಾಯಿತು ಎಂದು ಆರೋಪಿ ಶೀಜನ್ ಖಾನ್ ತಿಳಿಸಿದ್ದಾರೆ.
ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಜನ್ ಖಾನ್ ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಹಲವು ಸಂಗತಿಗಳನ್ನು ಶೀಜನ್ ಬಿಚ್ಚಿಟ್ಟಿದ್ದಾನೆ. ಈ ಹಿಂದೆಯೂ ತುನೀಶಾ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ರಕ್ಷಿಸಿದ್ದೆ, ನಂತರ ಈ ವಿಷಯವನ್ನು ತುನೀಶಾ ತಾಯಿಗೂ ತಿಳಿಸಿದ್ದು ಆಕೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಹೇಳಿದ್ದಾಗಿ ಶೀಜನ್ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸ್ ಮೂಲಗಳ ಪ್ರಕಾರ, ಬ್ರೇಕಪ್ ಏಕೆ ಸಂಭವಿಸಿತು ಎಂಬುದರ ಕುರಿತು ಆರೋಪಿ ಶೀಜನ್ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ಆಘಾತಕಾರಿ ವಿಷಯವನ್ನು ತಿಳಿಸಿದ್ದಾನೆ.ಶ್ರದ್ಧಾ ಕೊಲೆ ಪ್ರಕರಣದ ನಂತರ ತಾನು ತುಂಬಾ ಟೆನ್ಷನ್ಗೆ ಒಳಗಾಗಿದ್ದೆ ಎಂದು ಶೀಜನ್ ಹೇಳಿಕೊಂಡಿದ್ದಾನೆ. ಶ್ರದ್ಧಾ ಹತ್ಯೆ ಪ್ರಕರಣದ ನಂತರ ದೇಶದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿಯಲ್ಲಿ, ರಸ್ತೆಯಲ್ಲಿ ಕೇಳಿಬರುತ್ತಿರುವ ಚರ್ಚೆಯ ಬಗ್ಗೆ ಆತಂಕ ವ್ಯಕ್ತವಾಗಿತ್ತು. ತಾನು ಮುಸ್ಲಿಂ ತುನೀಶಾ ಹಿಂದೂ ಹುಡುಗಿ. ತುನಿಶಾ ತನಗಿಂತ ಚಿಕ್ಕವಳು ಎಂದು ಶೀಜನ್ ವಯಸ್ಸನ್ನೂ ಉಲ್ಲೇಖಿಸಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: