ಯಳಂದೂರು ತಾಲ್ಲೂಕು ಕಚೇರಿ ಅವ್ಯವಸ್ಥೆ ವಿರುದ್ಧ KRS ಪಾರ್ಟಿ ಯಿಂದ ಪ್ರತಿಭಟನೆ..

ಯಳಂದೂರು.ತಾಲ್ಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳಲ್ಲಿರುವ ಅವ್ಯವಸ್ಥೆಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು…

ಪಟ್ಟಣದ ನಾಡಮೆಗಲಮ್ಮ ದೇವಸ್ಥಾನದ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಒರಟು ಬಸ್ ನಿಲ್ದಾಣ, ಕೆ.ಕೆ. ರಸ್ತೆ, ಬಳೆ ಮಂಟಪ
ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು…

ಇಲಾಖೆ ಹಾಗೂ ಬ್ರಷ್ಟಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು…

ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಲ್.ಶ್ರೀನಿವಾಸ ಮಾತನಾಡಿ ಇಲ್ಲಿನ ಸರ್ಕಾರಿ ಕಚೇರಿಯ ನೌಕರರು ತಮ್ಮ ಗುರುತಿನ ಚೀಟಿಗಳನ್ನು ಧರಿಸುವುದಿಲ್ಲ, ಇಲಾಖೆ ಮುಂಬಾಗ ಸೇವೆಗಳ ಪಟ್ಟಿಯನ್ನು ಧರಿಸಿಲ್ಲ, ಸಕಾಲ ಪಟ್ಟಿಯಲ್ಲಿ ಪ್ರದರ್ಶಿಸಿಲ್ಲ, ಭ್ರಷ್ಟಾಚಾರ ನಿಗ್ರಹದಳ ಮತ್ತು ಲೋಕಾಯುಕ್ತರ ಸಂಪರ್ಕ ಮಾಹಿತಿ ಫಲಕ ಹಾಕಿಲ್ಲ,ವಿವಿಧ ಇಲಾಖೆಗಳ ಕೊಠಡಿಗಳಲ್ಲಿ ನಾಮಪಲಕ ಹಾಕಿರುವುದಿಲ್ಲ,ಇಲಾಖೆಗಳಲ್ಲಿ ಅಧಿಕಾರಿಗಳ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲ ಎಂದು ದೂರಿದರು….

ಸಿ.ಸಿ. ಟಿವಿ ಕೆಲಸ ಮಾಡುತ್ತಿಲ್ಲ,ಮಿನಿವಿಧಾನಸೌಧ ದುರಸ್ತಿ ಕಾಮಗಾರಿಯಲ್ಲಿ ಮೋಸ ನಡೆದಿದ್ದು ಕಳಪೆ ಕಾಮಗಾರಿ ಮಾಡಲಾಗುತ್ತಿದೆ, ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ,ಸರ್ವೆ ಇಲಾಖೆಯಲ್ಲಿ ಲಂಚಗುಳಿತನ ಅಪಾರವಾಗಿದೆ ಎಂದು ಆರೋಪ ಮಾಡಿದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜೈನ ಧರ್ಮ ಸಮಾಜದವರಿಂದ ಶಿಖರಜಿ ಉಳಿಸಿ ಎಂದು ಜಮಖಂಡಿ ನಗರದಲ್ಲಿ ಬ್ರಹತ್ ಪ್ರತಿಭಟನೆ!

Thu Jan 5 , 2023
ಜೈನ ಧರ್ಮ ಸಮಾಜದವರಿಂದ ಶಿಖರಜಿ ಉಳಿಸಿ ಎಂದು ಜಮಖಂಡಿ ನಗರದಲ್ಲಿ ಬ್ರಹತ್ ಪ್ರತಿಭಟನೆ ಶಿಖರಜಿ ಇಲ್ಲದಿದ್ದರೆ ಜೈನ ಧರ್ಮವಿಲ್ಲಾ., ಜಮಖಂಡಿ ನಗರದ ಹಳೆ ತಹಸೀಲ್ದಾರ ಕಚೇರಿ ಇಂದ ದೇಸಾಯಿ ವೃತ್ತದ ವರೆಗೂ ಜಾತಾ ಮೂಲಕ ಶಾಂತಿಯುತವಾದ ಪ್ರತಿಭಟನೆ ನಗರದ ದೇಸಾಯಿ ವೃತ್ತದಲ್ಲಿ ಕೆಲಕಾಲ ರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡಲಾಯಿತು ಸುಮಾರು 5000 ಜೈನ ಧರ್ಮ ಸಮಾಜದವರು ಪಾಲ್ಗೊಂಡಿದ್ದರು ಜೈನ ಸಮಾಜದವರಿಂದ ಉಪ ವಿಭಾಗಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial