ನವದೆಹಲಿ: ಮೇ ೩ಕ್ಕೆ ಎರಡನೇ ಹಂತದ ಲಾಕ್ಡೌನ್ ಮುಕ್ತಾಯವಾಗಲಿದೆ. ಇದಾದ ಬಳಿಕ ಏನು ಮಾಡಬೇಕು ಅನ್ನೋ ಬಗ್ಗೆ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾ ಕಡಿಮೆ ಇರುವುದು ನಿಜ. ಆದರೂ ಲಾಕ್ಡೌನ್ ನಿಯಮಗಳನ್ನು ಯಾರೂ ಉಲ್ಲಂಘಿಸಬಾರದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಕೈಗಾರಿಕೆ, ಕೆಲವು ವಸ್ತುಗಳ ವ್ಯಾಪಾರ ವಹಿವಾಟು ಮತ್ತು ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡೆದ್ದೇವೆ. ಕೊರೊನಾ ವಿರುದ್ಧ ಹಂತ ಹಂತವಾಗಿ ಲಾಕ್ಡೌನ್ ತೆರವು ಮಾಡಬೇಕಿದೆ ಎಂದು ಅಮಿತ್ ಶಾ ತಿಳಿಸಿದರು.
ಇಂದು ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಎಲ್ಲ ರಾಜ್ಯಗಳ ಸಿಎಂಗಳೂ ಭಾಗಿಯಾಗಿದ್ದರು. ಆದ್ರೆ, ಸಮಯದ ಅಭಾವದಿಂದಾಗಿ ಕೇವಲ ೯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿತ್ತು. ಮಿಕ್ಕ ರಾಜ್ಯಗಳಿಗೆ ತಮ್ಮ ಅಭಿಪ್ರಾಯವನ್ನ ಲಿಖಿತವಾಗಿ ಕಳಿಸಿಕೊಡಿ ಅಂತ ಸೂಚಿಸಲಾಗಿದೆ.
ಮೇಘಾಲಯ, ಮಿಜೋರಾಂ, ಪುಡುಚೇರಿ, ಉತ್ತಾರಖಂಡ್, ಹಿಮಾಚಲಪ್ರದೇಶ, ಒಡಿಶಾ, ಬಿಹಾರ, ಗುಜರಾತ್ ಮತ್ತು ಹರಿಯಾಣ ಸಿಎಂಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿತ್ತು. ಇದರಲ್ಲಿ ಮೇಘಾಲಯ ಮತ್ತು ಹಿಮಾಚಲಪ್ರದೇಶ ಮಾತ್ರ ಲಾಕ್ಡೌನ್ ಮುಂದುವರಿಸುವ ಬಗ್ಗೆ ಒಲವು ತೋರಿವೆ. ಮಿಕ್ಕ ೭ ರಾಜ್ಯಗಳ ಸಿಎಂಗಳು ಮೇ ೩ರ ಬಳಿಕ ಲಾಕ್ಡೌನ್ ಮುಂದುವರಿಸುವುದು ಬೇಡ.
ಲಾಕ್ಡೌನ್ ವಿಸ್ತರಣೆ ಬಗ್ಗೆ ಕೆಲವು ಸಿಎಂಗಳಿಂದ ಪ್ರಧಾನಿ ಮೋದಿಗೆ ಮಾಹಿತಿ
Please follow and like us: