ರಾಮನಗರ : ಅಪಘಾತದಲ್ಲಿ ಸಾವನ್ನಪ್ಪಿದಂತ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನಮಂತು ಮನಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಹನಮಂತು ಪತ್ನಿ, ತಾಯಿ ಸೇರಿದಂತೆ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಅಲ್ಲದೇ ತಾವು ಘೋಷಿಸಿದಂತೆ 5 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ನ್ನು ಹನಮಂತು ಪತ್ನಿಗೆ ಹಸ್ತಾಂತರಿಸಿದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದೆ ಅವರು, ಹನಮಂತು ಅವರ ಪತ್ನಿಗೆ ಅತ್ತೆಯ ಮನೆಯಲ್ಲಿಯೇ ಇರುವಂತೆ ಸಲಹೆ ಮಾಡಿದರು. ಅಲ್ಲದೇ ಅವರ ಅತ್ತೆಗೆ ಮಗಳೆಂಬಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಈ ಬಳಿಕ ತಾವು ಘೋಷಣೆ ಮಾಡದಂತೆ 5 ಲಕ್ಷ ಧನಸಹಾಯದ ಚೆಕ್ ಅನ್ನು ಮೃತ ಹನಮಂತು ಪತ್ನಿಯವರಿಗೆ ನೀಡಿದರು.