ಕಿರಣ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ರಿಲೀಸ್ಗಾಗಿ ಕಾಯುತ್ತಿರುವ ಅಭಿಮನ್ಯು ಕಾಶಿನಾಥ್ ಈಗ ತಮ್ಮ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ. ಕಿರಣ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ರಿಲೀಸ್ಗಾಗಿ ಕಾಯುತ್ತಿರುವ ಅಭಿಮನ್ಯು ಕಾಶಿನಾಥ್ ಈಗ ತಮ್ಮ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಯೋಜಿಸಿದ್ದಾರೆ. ತಮ್ಮ ವೃತ್ತಿಜೀವನದ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಪ್ರೇಮಕಥೆಯೊಂದಿಗೆ ಪ್ರಾರಂಭಿಸುತ್ತಿರುವುದು ಸಂತೋಷವಾಗಿದೆ ಎಂದು ನಿರ್ದೇಶಕ ಯಾದವ್ ರಾಜ್ ಹೇಳಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಕೋಲಾರ ಮತ್ತು ಮದ್ದೂರು ಸೇರಿದಂತೆ ಇತರ ಸ್ಥಳಗಳಲ್ಲಿ ನಡೆಯಲಿದೆ. ನಾವು ಮಹಾರಾಷ್ಟ್ರದಲ್ಲಿ ಒಂದು ಹಾಡಿನ ಚಿತ್ರೀಕರಣಕ್ಕೂ ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ತಮಿಳಿನ ಹೆಸರಾಂತ ಚಿತ್ರಗಳಾದ ಗೋಲಿ ಸೋಡಾ ಮತ್ತು ಚಂಡಿ ವೀರನ್ನ ಸಂಗೀತ ಸಂಯೋಜಕ ಎಸ್ಎನ್ ಅರುಣಗಿರಿ ಸೂರಿ ಲವ್ಸ್ ಸಂದ್ಯಾಗೆ ಸಂಗೀತ ನೀಡಲಿದ್ದಾರೆ. ಅಲಕ ಜೆವಿ ಮತ್ತು ಬಿ ಶ್ರೀನಿವಾಸ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ಸ್ಟಂಟ್ ಮಾಸ್ಟರ್ ದಿನೇಶ್ ಕಾಸಿ (ಮೈಕೆಲ್), ಸಂಕಲನಕಾರ ಉಜ್ವಲ್ ಗೌಡ ಮತ್ತು ಡ್ಯಾನ್ಸ್ ಕೊರಿಯೋಗ್ರಾಫರ್ ರಾಜ್ ಕಿಶೋರ್ ತಾಂತ್ರಿಕ ತಂಡದ ಭಾಗವಾಗಿ ಇರಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada