ಇಂಗ್ಲೆಂಡ್ನಿಂದ ಕೇರಳಕ್ಕೆ ರೋಗಿಯ ಏರ್ಲಿಫ್ಟ್

ತಿರುವನಂತಪುರಂ: ತೀವ್ರ ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯನ್ನ ಇಂಗ್ಲೆಂಡ್‌ನಿಂದ ಏರ್‌ಲಿಫ್ಟ್ ಮಾಡಿ ಕೇರಳಕ್ಕೆ ಕರೆತರುವಲ್ಲಿ ವಾಟ್ಸ್ಯಾಪ್ ಗ್ರೂಪ್‌ವೊಂದು ನೆರವಾಗಿದೆ. ಕೊರೊನಾದಿಂದ ಭಾರತದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಿದ್ದರಿಂದ  ಈ ವಾಟ್ಸ್ಯಾಪ್ ಗ್ರೂಪ್‌ನ ಸಹಾಯದಿಂದ ರೋಗಿಯೊಬ್ರು ದೇಶಕ್ಕೆ ವಾಪಸ್ ಆಗಲು ಅನುಕೂಲವಾಗಿದೆ. ಕೇರಳಿಗರನ್ನೊಳಗೊಂಡ ದೆಹಲಿ ಮೂಲದ ಈ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಜೆ ಅಲ್ಫೋನ್ಸ್ ಕೂಡ ಇದ್ದರು. ೫೦ ದಿನಗಳ ಹಿಂದೆ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟಿವ್ ಹೆಸರಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿತ್ತು. ಕುರಿಯನ್ ಜೋಸೆಫ್ ಅವರು ಇದರ ನೇತೃತ್ವ ವಹಿಸಿದ್ದರು. ಈ ಗುಂಪಿನ ಸಹಾಯದಿಂದ, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಐಟಿ ಉದ್ಯೋಗಿಯನ್ನು ಕಳೆದ ಶುಕ್ರವಾರ ಇಂಗ್ಲೆಂಡ್ ಆಸ್ಪತ್ರೆಯಿಂದ ಕೊಜಿಕ್ಕೋಡ್‌ಗೆ ಏರ್ ಆ್ಯಂಬುಲೆನ್ಸ್ ಮೂಲಕ ಕರೆತರಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಾಹಿತಿ ನೀಡಿದವರಿಗೆ ೧೧ ಸಾವಿರ ಬಹುಮಾನ

Sat Apr 25 , 2020
ಲಖನೌ: ಕೊರೊನಾ ಪತ್ತೆ ಪರೀಕ್ಷೆಗೆ ಒಳಗಾಗದೆ ತಲೆಮರೆಸಿಕೊಂಡು ಓಡಾಡುವ ತಬ್ಲಿಗಿ ಜಮಾತ್ ಸದಸ್ಯರ ಕುರಿತು ಮಾಹಿತಿ ನೀಡುವವರಿಗೆ ರೂ.೧೧ ಸಾವಿರ ನಗದು ಬಹುಮಾನ ನೀಡುವುದಾಗಿ ಉತ್ತರ ಪ್ರದೇಶದ ಸಲೀಮ್‌ಪುರದ ಬಿಜೆಪಿ ಸಂಸದ ರವೀಂದ್ರ ಕುಶ್ವಾಹ ಘೋಷಿಸಿದ್ದಾರೆ. ದೆಹಲಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದಿದ್ದ ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಅನೇಕರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ದೇಶದ ನಾನಾ ಕಡೆಗಳಿಂದ ಜನ ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ಪರಿಣಾಮವಾಗಿ ದೇಶದ ವಿವಿಧೆಡೆಗಳಿಗೆ […]

Advertisement

Wordpress Social Share Plugin powered by Ultimatelysocial