ಮಹಾಮಾರಿ ಕರೋನ ದಿಂದ ರಾಜ್ಯದಾದ್ಯಂತ ಲಾಕ್ ಡೌನ್ ಆಗಿ ಎಲ್ಲರಿಗೂ ಒಂದೊಂದು ಸಮಸ್ಯೆ ಇದ್ದರೆ ಕೆಲವರಿಗೆ ಮಾತ್ರ ಒಂದು ಹೊತ್ತಿನ ತುತ್ತು ಊಟಕ್ಕೂ ಸಂಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿ ನಡುವೆಯೂ ಕನ್ನಡ ಚಿತ್ರ ರಂಗದ ಕೆಲವು ನಟರು ಹಾಗೂ ಅವರ ಅಭಿಮಾನಿಗಳಿಂದ ಸಹಾಯ ಮಾಡುತ್ತಿದ್ದು, ಅದೇ ರೀತಿ ಗಣಿನಾಡು ಬಳ್ಳಾರಿಯಲ್ಲಿ ಕೂಡ ಬಡ ಜನರ ಊಟದ ಸೇವೆಗಾಗಿ ಸತತ ೨೫ ದಿನಗಳಿಂದ ಪೊಗರು ಚಿತ್ರ ನಟ ಧ್ರುವ ಸರ್ಜಾ ಅವರ ಅಭಿಮಾನಿಗಳಿಂದ ಪ್ರತಿದಿನ ನಗರದಲ್ಲಿ ಪ್ರಮುಖ ರಸ್ತೆ, ದೇವಸ್ಥಾನ, ಬಸ್ ನಿಲ್ದಾಣ ಇನ್ನಿತರ ಸರ್ವಜನಿಕ ಪ್ರದೇಶದಲ್ಲಿ ಹಸಿವಿನಿಂದ ಇರುವ ಬಡಜನರಿಗೆ ಧ್ರುವ ಸರ್ಜಾ ಕಟ್ಟಾಭಿಮಾನಿ ಬೆಣಕಲ್ ಎಂ. ಜಿ. ಕನಕ ಮತ್ತು ಅವರ ಪತ್ನಿಯ ಸಹಾಯ ಹಾಗೂ ಸ್ನೇಹಿತರ ನೆರವಿನೊಂದಿಗೆ ಪ್ರತಿ ದಿನ ಸ್ವತಃ ತಾವೇ ಮನೆಯಲ್ಲಿ ಅಡುಗೆ ತಯಾರಿಸಿ ಎಲ್ಲಾ ಬಡ ವೃದ್ಧರಿಗೆ ಅಂಗವಿಕರಿಗೆ ಹಸಿವು ನೀಗಿಸುತ್ತಿರುವ ಧ್ರುವ ಸರ್ಜಾ ಎಂ. ಜಿ. ಕನಕ ಇವರಿಗೆ ಬಳ್ಳಾರಿಯ ಸಾರ್ವಜನಿಕರಿಂದ ತುಂಬಾ ಪ್ರಶಂಸೆ ಬರುತ್ತಿದೆ.
ಧ್ರುವ ಸರ್ಜಾ ಅಭಿಮಾನಿಗಳಿಂದ ಊಟ ವಿತರಣೆ
Please follow and like us: