ಮುಗದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, ಪವರ್ ಪ್ಲೇ ಹಂತದಲ್ಲಿ ನಾವು ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ನಾವು ಯಾರನ್ನಾದರೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ವಿಶೇಷವಾಗಿ, ಪಾಕಿಸ್ತಾನದಂತಹ ತಂಡವು ಪ್ರಪಂಚದ ಯಾವ ತಂಡವನ್ನಾದರೂ ಸೋಲಿಸಬಹುದು ಎಂದು ಹೇಳಿದ್ದರು.ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಜಯ್ ಜಡೇಜಾ, ಪಾಕಿಸ್ತಾನ ವಿರುದ್ಧದ ಪಂದ್ಯ ಸೋತ ಬಳಿಕ ವಿರಾಟ್ ಕೊಹ್ಲಿ ಹೇಳಿಕೆಯನ್ನು ಕೇಳಿದ್ದೇನೆ. ಇದರಿಂದ ನನಗೆ ಬೇಸರ ತರಿಸಿದೆ. ಏಕೆಂದರೆ 2 ವಿಕೆಟ್ ಹೋದರೂ ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಇದ್ದರು. ಪಂದ್ಯ ಕೈ ಜಾರಿತ್ತು ಎಂದು ಹೇಳುವ ಅಗತ್ಯವೇ ಇಲ್ಲ. ಇನ್ನೂ ಎಸೆತವನ್ನು ಎದುರಿಸದೇ ಇರುವಾಗಲೇ ಇಂಥದ್ದೊಂದು ಆಲೋಚನೆ ಕೊಹ್ಲಿ ತಲೆಯಲ್ಲಿ ಮೂಡಿದೆ ಎಂಬುದು ಭಾರತ ತಂಡದ ಮನಸ್ಥಿತಿಯನ್ನು ತೋರಿಸುತ್ತದೆ.. ನಾವು ಇಂಗ್ಲೆಂಡ್ ತಂಡವನ್ನು ನೋಡಿ ಕಲಿಯಬೇಕಿದೆ. ಅವರು ಕ್ರೀಸ್ನಲ್ಲಿ ಯಾರೇ ಇರಲಿ ಆಕ್ರಮಣಕಾರಿ ಆಟವಾಡುವುದೊಂದೇ ಅವರ ಮಂತ್ರವಾಗಿರುತ್ತದೆ. ಎರಡು ವಿಕೆಟ್ ಕಳೆದುಕೊಂಡಾಗ ಕುಗ್ಗಬಾರದು’ ಎಂದು ಜಡೇಜಾ ಹೇಳಿದ್ದಾರೆ.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada