ಇತ್ತಿಚಿನ ದಿನಗಳಲ್ಲಿ ಎಲ್ಲಾ ಬಾಷೆಯಲ್ಲಿ ಹಲವು ಆಲ್ಬಮ್ ಸಾಂಗ್ಸ್ ಬರುವುದು ಕಾಮನ್ ಆಗಿದೆ.ಆದರೆ ಕನ್ನಡದಲ್ಲೂ ಆಲ್ಬಂ ಸಾಂಗ್ ಗೆ ಎನು ಕಮ್ಮಿ ಇಲ್ಲಾ ಗುರು ಎಂಬತೆ ಈ ಜನನದಂಪತಿಗಳು ಇದೀಗ ಹೊಸ ಹಾಡನ್ನ ಎಲ್ಲೆಡೆ ಪರಿಚಯಿಸಿದ್ದಾರೆ.ಇನ್ನು ಸಾಂಡಲ್ ವುಡ್ ನಲ್ಲಿ ಚಂದನ ಶೆಟ್ಟಿ ಅವರ ಹಲವು ಹಿಟ್ rap ಹಾಡುಗಳು ಇವೆ .ಆದರೆ ಅದೇ ರೀತಿಯ ಹಾಡುಗಳಿಗೆ ಜೋಶ ನಿಡಲು ಇದೀಗ ಮತ್ತೊಬ್ಬ ಗಾಯಕಿ ಸಿಕ್ಕಿರುವುದು ಹೆಮ್ಮೆಯ ವಿಚಾರ […]

ಲೇಡಿ ಬ್ರೂಸ್​ಲೀ’ ಎಂದೇ ಜನಪ್ರಿಯರಾಗಿರುವ ಆಯೇಷಾ, ಮೂರ್ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪತ್ತೆಯೇ ಇರಲಿಲ್ಲ. ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬುದು ಗೊತ್ತಿರಲಿಲ್ಲ. ಈಗ ಆಯೇಷಾ, ಬಹಳ ದಿನಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ‘ಖಲ್ಲಾಸ್’ ಎಂಬ ಚಿತ್ರದ ಮೂಲಕ.’ಖಲ್ಲಾಸ್’ ಚಿತ್ರದ ಮುಹೂರ್ತ ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಈ ಚಿತ್ರವನ್ನು ತೆಲುಗಿನ ಬೋಯಪಾತಿ ಸುಬ್ಬರಾವ್ ನಿರ್ವಿುಸಿದರೆ, ಶಶಿಕಾಂತ್ ಆನೇಕಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕಥೆ ಏನಿರಬಹುದು? ಆಯೇಷಾ […]

ಪಾಕಿಸ್ತಾನದ ಭಯೋತ್ಪಾದಕನೊಬ್ಬನನ್ನ ರಾಷ್ಟ್ರ ರಾಜಧಾನಿಯ ಲಕ್ಷ್ಮಿ ನಗರದಲ್ಲಿ ದೆಹಲಿ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ಬಂಧಿತ ಭಯೋತ್ಪಾದಕ 40 ವರ್ಷದ ಮೊಹಮ್ಮದ್ ಅಸ್ರಾಫ್ ಎಂದು ಗುರುತಿಸಲಾಗಿದ್ದು. ಇವನು ಹಬ್ಬದ ಸಮಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಪ್ಲಾನ್ ಮಾಡಿದ್ದ ಎಂದು ವರದಿಯಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ನಿವಾಸಿ ಪಾಕಿಸ್ತಾನಿ ಭಯೋತ್ಪಾದಕ ನಕಲಿ ಗುರುತಿನ ಚೀಟಿ ಅಡಿಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿದ್ದ ಮತ್ತು ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ […]

ಬೆಂಗಳೂರು : ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೌಶಲ್ಯಯ ಮತ್ತು ಅರೆಕೌಶಲ್ಯ ವಲಯದಲ್ಲಿ ಕನ್ನಡಿಗರಿಗೆ ಶೇ. 75 ರಷ್ಟು ಉದ್ಯೋಗಗಳನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಔದ್ಯೋಗಿಕ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಖಾಸಗಿ ಕ್ಷೇತ್ರದಲ್ಲಿ ಹೂಡಿಕೆಯಾಗುವ ಬಂಡವಾಳದಿಂದ ಸೃಷ್ಟಿಯಾಗುವ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳು ದೊರಕುವಂತೆ ಮಾಡಲಾಗುವುದು. ಸರ್ಕಾರಿ […]

ಹಾಸನಾಂಬೆ ದೇಗುಲಕ್ಕೆ ಇಂದು ಭೇಟಿ ಕೊಟ್ಟು  ದರ್ಶನ ಪಡೆದ ಮೈಸೂರು ರಾಜ ವಂಶಸ್ಥ  ಯದುವೀರ ಚಾಮರಾಜ ಒಡೆಯರ್  ದೇವಿಗೆ ವಿಶೇಷ ಪೂಜೆ ಸಲ್ಲಿಸಿದದರು.  ಇದೇ ಮೊದಲ ಬಾರಿಗೆ ಯದುವೀರ ಒಡೆಯರ್  ಹಾಸನಾಂಬೆ ದರ್ಶನ ಪಡೆದರು.ತಲಕಾಡು ಪಂಚಲಿಂಗ ಮಹೋತ್ಸವ; ಯದುವೀರ್ ದಂಪತಿಯಿಂದ ವಿಶೇಷ ಪೂಜೆವರ್ಷಕ್ಕೆ ಒಮ್ಮೆ ದರ್ಶನ ನೀಡೊ ಹಾಸನಾಂಬೆ ತಾಯಿ  ದರ್ಶನಕ್ಕಿಂದು ಭಕ್ತರ ದಂಡು ಆಗಮಿಸಿದೆ. ಭಾನುವಾರವಾಗಿರೋ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಆಗಮಿಸುತ್ತಿರುವ ಅಪಾರ ಭಕ್ತರು  ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ […]

ನವದೆಹಲಿ ಜಿಮ್ ತರಬೇತುದಾರನ ಮೇಲೆ ಗುಂಡಿನ ದಾಳಿಯಾಗಿದೆ. ವಾಯುವ್ಯ ದೆಹಲಿಯ ಮಾಡೆಲ್ ಟೌನ್‌ನಲ್ಲಿ 26 ವರ್ಷದ ಜಿಮ್ ತರಬೇತುದಾನ ತಲೆಗೆ ಗುಂಡು ಹಾರಿಸಲಾಗಿದೆ.ಸಹೋದರಿಯನ್ನು ಮದುವೆಯಾದ  ಎಂಬ ಕಾರಣಕ್ಕೆ ಹೆಂಡತಿಯ ತಮ್ಮನೆ ದಾಳಿ ಮಾಡಿದ್ದು ಗುಂಡೇಟು ತಿಂದ ದೇವ ಚಂದ್ ಪರಿಸ್ಥಿತಿ ಚಿಂತಾಜನಕವಾಗಿದೆ.ಪೊಲೀಸರ  ಪ್ರಕಾರ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾದಳು ಎಂಬ ಕಾರಣಕ್ಕೆ ಆರೋಪಿ ಶಾನವಾಜ್ ಕೋಪಗೊಂಡಿದ್ದ. ಇದೇ ಕಾರಣಕ್ಕೆ ಗುಂಡಿನ ದಾಳಿ ಮಾಡಿದ್ದಾನೆ. ದಾಳಿ ನಂತರ ದೆಹಲಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದ […]

ನಟ ಪುನೀತ್ ರಾಜ್​ಕುಮಾರ್ ಅಕಾಲಿಕ ಮರಣ ಹೊಂದಿ 4 ದಿನಗಳು ಕಳೆಯುತ್ತಿದ್ದರೂ, ಜನಕ್ಕೆ ಅವರ ಸಾವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಬ್ಬಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪುನೀತ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ಈ ಸಂಬಂಧ ಕೇಂದ್ರ ಸರ್ಕಾರ ಪತ್ರ ಬರೆಯುವುದಾಗಿ ತಿಳಿಸಿದರು. ಪುನೀತ್ ರಾಜ್ ಕುಮಾರ್ ದಿವಂಗತ ನಟಸಾರ್ವಭೌಮ ರಾಜ್ ಕುಮಾರ ಅವರ ಪುತ್ರ. ಮೊನ್ನೆ ನಿಧನರಾದರು, ಅವರದ್ದು ಸಾಯುವ ವಯಸ್ಸಲ್ಲ. ಪ್ರತಿಭಾವಂತ ಸಿನಿಮಾ ನಟ […]

ಮಂಗಳೂರು: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಇಲ್ಲೊಬ್ಬ ಕಾಮುಕ ಏನು ಅರಿಯದ ಎರಡು ವರ್ಷದ ಮಗುವಿನ ಮೇಲೆರಗಿದ್ದಾನೆ.  ವಿಕೃತಿ ಮೆರೆದ ಕಾಮುಕನಿಗೆ ಸ್ಥಳೀಯರೇ ತಕ್ಕ ಶಾಸ್ತಿ ಮಾಡಿದ್ದಾರೆ. ಕಡಲನಗರಿಯಲ್ಲಿ ಕಾಮುಕನೊಬ್ಬ ಎರಡು ವರ್ಷದ ಮಗುವನ್ನು ತನ್ನ ಕಾಮತೃಷೆಗೆ  ಬಳಸಿಕೊಂಡು ವಿಕೃತಿ ಮೆರೆದಿದ್ದಾನೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡ್ತಿದ್ದ ಬಿಹಾರ ಮೂಲದ ದಂಪತಿಯ ಎರಡು ವರ್ಷದ ಮಗುವಿನ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. […]

ಕೋಬ್ರಾ ಹಾವಿನಿಂದ ಕಚ್ಚಿಸಿ 25 ವರ್ಷದ ಪತ್ನಿಯನ್ನ ಕೊಂದ ಪತಿಗೆ ಕೇರಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಕಳೆದ ವರ್ಷ ಮೇ ತಿಂಗಳಲ್ಲಿ ಪತ್ನಿ ಉತ್ತರಾಳ ಮಲಗಿದ್ದಾಗ ಕೋಬ್ರಾ ಹಾವಿನಿಂದ ಕಚ್ಚಿಸಿ ಕೊಂದ ಆರೋಪದಲ್ಲಿ ಪತಿ ಸೂರಜ್ ಕುಮಾರ್ ನನ್ನ ಅಕ್ಟೋಬರ್ 11ರಂದು ಬಂಧಿಸಲಾಗಿತ್ತು. ಪತ್ನಿಯನ್ನ ಕೊಲ್ಲಲು ಮೊದಲ ಬಾರಿ ಹಾವೊಂದನ್ನ ಬಳಸಿ ವಿಫಲವಾಗಿದ್ದು, ನಂತರ ಕೋಬ್ರಾದಿಂದ ಕಚ್ಚಿಸಿ ಹತ್ಯೆಗೈದಿದ್ದ.ಪ್ರಕರಣ ಅಪರೂಪದಲ್ಲೇ ಅಪರೂಪ ಎಂದು ವಿಶ್ಲೇಷಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಐ. […]

ಈ ಬಾರಿ ಮೈಸೂರು ದಸರಾ ಖರ್ಚು ವೆಚ್ಚದ ವಿವರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekhar) ನೀಡಿದರು. ಕೊರೊನಾ ಹಿನ್ನೆಲೆ ಕಳೆದ ಬಾರಿಯಂತೆ ಈ ವರ್ಷವೂ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಮೈಸೂರಿನ ಅರಮನೆ ಮಂಡಳಿಯಲ್ಲಿ ಸುದ್ದಿಗೋಷ್ಠಿ ವೇಳೆ ಸಚಿವ ಸೋಮಶೇಖರ್ ಲೆಕ್ಕ ಮಂಡನೆ ಮಾಡಿದರು.ಸರ್ಕಾರದಿಂದ ದಸರಾ ಆಚರಣೆ ಆರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆರು ಕೋಟಿ ರೂ.ಗಳಲ್ಲಿ ಈ ಬಾರಿ 5,42,07,679 ಕೋಟಿ ಖರ್ಚು ಆಗಿದೆ. ಮೈಸೂರು, […]

Advertisement

Wordpress Social Share Plugin powered by Ultimatelysocial