ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕರು ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದಾರಿ ಮಧ್ಯೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕೆಲ ಕಾರ್ಮಿಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ಎಲ್ಲದರ ಮಧ್ಯೆ ಕಾರ್ಮಿಕನ ಚಪ್ಪಲಿ ಸುದ್ದಿಯಲ್ಲಿದೆ. ಪಂಜಾಬ್ ನಿಂದ ಹರಿಯಾಣಕ್ಕೆ ಹೊರಟ ಕಾರ್ಮಿಕರನ್ನು ಅಂಬಾಲಿಯಲ್ಲಿ ಪೊಲೀಸರು ತಡೆದಿದ್ದರು. ಪೊಲೀಸರ ಕೆಲವರ ಚಪ್ಪಲಿ ಪಡೆದಿದ್ದರು. ಆದ್ರೆ ಇದಕ್ಕೆ ಹೆದರದ ಕಾರ್ಮಿಕರು ನೀರಿನ ಬಾಟಲಿಯನ್ನು ಚಪ್ಪಲಿ ಮಾಡಿಕೊಂಡು ರಸ್ತೆಗಿಳಿದಿದ್ದಾರೆ. ಕಾರ್ಮಿಕರು ಹೆದ್ದಾರಿಗೆ ಬರ್ತಿದ್ದಂತೆ ತಡೆದ ಪೊಲೀಸರು ಪಂಜಾಬ್ ಗೆ ವಾಪಸ್ ಹೋಗುವಂತೆ ಹೇಳಿದ್ದಾರೆ. ಈ ವೇಳೆ ಅನೇಕರು ಚಪ್ಪಲಿ ಬಿಟ್ಟು ಓಡಿದ್ದಾರೆ. ಚಪ್ಪಲಿಯಿಲ್ಲದ ಕೆಲ ಕಾರ್ಮಿಕರಿಗೆ ಸ್ಥಳೀಯ ಆಡಳಿತ ಚಪ್ಪಲಿ ನೀಡಿದೆ.
ನೀರಿನ ಬಾಟಲಿಯನ್ನೇ ಚಪ್ಪಲಿ ಮಾಡಿಕೊಂಡ ಕಾರ್ಮಿಕ
Please follow and like us: