ಬರಲಿದೆ ಕೊರೊನಾಕ್ಕಿಂತಲು ಭೀಕರ ವೈರಸ್

ಏನೇ ಮಾಡಿದರೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವ ಈ ಕೊರೊನಾ  ಸೋಂಕು ದೊಡ್ಡ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ವಿಜ್ಞಾನಿಗಳು ಅತ್ಯಂತ ಭಯ ಹುಟ್ಟಿರುವ ವರದಿಯನ್ನು ನೀಡಿದ್ದಾರೆ. ಅದೇನೆಂದರೆ, ಕರೊನಾ ವೈರಸ್​ಗಿಂತಲೂ ಭೀಕರ ವೈರಸ್​ ಜಗತ್ತನ್ನು ಆವರಿಸಲಿದ್ದು, ಅದು ವಿಶ್ವದ ಅರ್ಧದಷ್ಟು ಜನರ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ವರದಿಯನ್ನು ಅವರು ನೀಡಿದ್ದಾರೆ. ವಿಜ್ಞಾನಿಗಳು ಹೇಳಹೊರಟಿರುವ ಈ ವೈರಸ್​ ಶುರುವಾಗುವುದು ಕೋಳಿ ಸಾಕಾಣಿಕೆ ಕೇಂದ್ರದಿಂದ ಎಂಬುದು. ಅಂದರೆ ಇತ್ತೀಚೆಗೆ ಕೋಳಿ ಸಾಕಾಣಿಕೆ ಕೇಂದ್ರವು ಎಗ್ಗಿಲ್ಲದೇ ಶುರುವಾಗಿದ್ದು, ಇದೇ ರೀತಿ ಮುಂದುವರೆದರೆ, ವಿಶ್ವಕ್ಕೆ ವಿಶ್ವವೇ ವೈರಸ್​ನಿಂದ ನಲುಗಿ ಹೋಗಲಿದೆ ಎಂಬ ಎಚ್ಚರಿಕೆಯನ್ನು ಸಂಶೋಧನೆಗಳ ಮೂಲಕ ಅವರು ತಿಳಿಸಿದ್ದಾರೆ. ಕೋಳಿ ಸಾಕಾಣಿಕೆ ಕೇಂದ್ರದಿಂದ ಅಪೋಕ್ಯಾಲಿಪ್ಸ್ ಎಂಬ ವೈರಸ್ ಹುಟ್ಟಿಕೊಳ್ಳಲಿದ್ದು, ಇದು ಕರೊನಾಕ್ಕಿಂತಲೂ ಅತ್ಯಧಿಕ ಪಟ್ಟು ಅಪಾಯಕಾರಿ ಎಂದಿದ್ದಾರೆ ಸಂಶೋಧಕ ಡಾ.ವೈಕೆಲ್​ ಗ್ರೆಗರ್​.ಇದನ್ನು ಅವರು ತಮ್ಮ ‘ಹೌ ಟು ಸರ್ವೈವ್ ಎ ಅಪೆಡೆಮಿಕ್​ ಎಂಬ ಪುಸ್ತಕದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಏರುಗತಿಯಲ್ಲಿ ಸಾಗುತ್ತಿರುವ ಕೋಳಿ ಸಾಕಾಣಿಕೆ ಕೇಂದ್ರವನ್ನು ಗಮನಿಸಿ ಅವರು ಈ ವಿಷಯ ತಿಳಿಸಿದ್ದಾರೆ. ಮಾಂಸವನ್ನು ತಿನ್ನುವುದರಿಂದ ಇಡೀ ವಿಶ್ವ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದು ಕರೊನಾಕ್ಕಿಂತಲೂ ಅತ್ಯಂತ ಶೀಘ್ರವಾಗಿ ಹರಡಲಿದೆ ಎಂದೂ ಅವರು ಎಚ್ಚರಿಸಿದ್ದಾರೆ. ಕೋಳಿಗಳು ಒಟ್ಟೊಟ್ಟಿಗೆ ಇದ್ದಾಗ ಅವುಗಳಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಆಗ ಶ್ವಾಸಕೋಶದ ಒಳಪದರದಲ್ಲಿ ಅಡಗಿರುವ ಸಾಂಕ್ರಾಮಿಕ ಕಣಗಳು ಹೊರಕ್ಕೆ ಬಂದು ಅವು ಅತಿ ಶೀಘ್ರದಲ್ಲಿ ಎಲ್ಲೆಡೆ ಪಸರಿಸುತ್ತವೆ ಎಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ತಬ್ಲಿಘಿ ಜಮಾತ್‌ ಸದಸ್ಯರು ಭಯೋತ್ಪಾದಕರು: ಪ್ರಾಂಶುಪಾಲೆ

Mon Jun 1 , 2020
ಉತ್ತರ ಪ್ರದೇಶ: ಕಾನ್ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆಯೊಬ್ಬರು ಮಾತನಾಡಿರುವ ವಿಡಿಯೋ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ತಬ್ಲಿಘಿ ಜಮಾತ್‌ ಸದಸ್ಯರನ್ನು ಅವರು ಭಯೋತ್ಪಾದಕರು ಎಂದು ಕರೆದಿದ್ದಾರೆ. ತಮ್ಮ ಕಚೇರಿಯಲ್ಲಿ ಹಲವು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಾಂಶುಪಾಲೆ. ಕೊರೊನಾ ಸೋಂಕು ಅಂಟಿಸಿಕೊಂಡ ತಬ್ಲಿಘಿ ಜಮಾತ್‌ ಸಂಘಟನೆ ಸದಸ್ಯರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ ಎಂದಿದ್ದಾರೆ. ತಬ್ಲಿಘಿ ಜಮಾತ್ ಸದಸ್ಯರಿಗೆ ಚಿಕಿತ್ಸೆ ನೀಡಲು ಐಸೋಲೇಷನ್ ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ತೆರಿಗೆದಾರರ ಕೋಟ್ಯಂತರ ರೂ […]

Advertisement

Wordpress Social Share Plugin powered by Ultimatelysocial