ನನಗೆ ಕಳೆದ ವರ್ಷ ಲೋಕಸಭಾ ಟಿಕೆಟ್ ತಪ್ಪಿದ ವೇಳೆ ಸಂಧಾನ ಮಾಡಲು ಬಂದಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಸಭಾ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನ ಈಡೇರಿಸಿಕೊಡಿ ಎಂದು ಕೇಳಿದ್ದೇನೆ ಎಂದು ರಮೇಶ ಕತ್ತಿ ಹೇಳಿದರು. ಸುದ್ದಿಗರರೊಂದಿಗೆ ಮಾತನಾಡಿ ರಾಜ್ಯಸಭಾ ಸ್ಥಾನ ತೆರವುಗೊಳ್ಳುತ್ತಿದ್ದು, ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಈ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು. ಅಣ್ಣ ಉಮೇಶ ಕತ್ತಿ ವಜ್ರ ಇದ್ದಂತೆ. ಅವರಿಗೆ ಅವರದ್ದೆ ಆದ ಸಾಮರ್ಥ್ಯವಿದೆ. ಇವತ್ತಿಲ್ಲ ನಾಳೆಯಾದರೂ ಸಚಿವರಾಗ್ತಾರೆ. ಅದರಲ್ಲಿ ಎರಡು ಮಾತಿಲ್ಲ.
ಬಿಎಸ್ವೈ ನೀಡಿದ್ದ ಭರವಸೆ ಈಡೇರಿಸಲಿ
Please follow and like us: