ರಿಪ್ಪನ್ ಪೇಟೆ:ಇಲ್ಲಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಮಜರೆ ಚಿಟ್ಟೆ ಗದ್ದೆಯಲ್ಲಿ ಗುರುವಾರ ಮುಂಜಾನೆ ವಿದ್ಯಾ (32) ಎಂಬುವವರು ತಮ್ಮ ಎರಡನೇ ಮಗು ತನ್ವಿ (4)ಯನ್ನು ವೇಲ್ನಿಂದ ಸೊಂಟಕ್ಕೆ ಕಟ್ಟಿಕೊಂಡು ಮನೆ ಮುಂಭಾಗದ ಬಾವಿಗೆ ಹಾರಿದ್ದಾರೆ.ಶಿಕಾರಿಪುರ ತಾಲ್ಲೂಕಿನ ಸಿದ್ದಾಪುರ ಗ್ರಾಮದ ವಾಸಿ ಮಂಜಪ್ಪ ಮತ್ತು ಗಿರಿಜಮ್ಮ ದಂಪತಿಯ ಮೂರನೇ ಪುತ್ರಿ ವಿದ್ಯಾ ಎಂಬುವವರನ್ನು ಹೊಸನಗರ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಚಿಟ್ಟೆಗದ್ದೆ ವಾಸಿ ನಾಗೇಶ್ ಮತ್ತು ಭಾಗ್ಯ ದಂಪತಿಯ ಮೊದಲನೇ ಮಗ ಲೋಹಿತ್ (36) ಎಂಬುವವರಿಗೆ 2014ರ ಎಪ್ರಿಲ್ನಲ್ಲಿ ಮದುವೆ ಮಾಡಿಕೊಡಲಾಗಿತ್ತು.’ಗಟ್ಟಿ ಬಂಗಾರ ತರುವಂತೆ ಗಂಡನ ಮನೆಯವರು ಮಗಳನ್ನು ಪೀಡಿಸುತ್ತಿದ್ದರು. ಮಾನಸಿಕ ಕಿರುಕುಳ ನೀಡುತ್ತಿದ್ದರು. ಗಂಡ, ಅತ್ತೆ, ಮಾವನೇ ಮಗಳನ್ನು ಹೊಡೆದು ಕೊಲೆ ಮಾಡಿ ಬಾವಿಗೆ ಹಾಕಿದ್ದಾರೆ’ ಎಂದು ವಿದ್ಯಾ ತಂದೆ ಮಂಜಪ್ಪ ಅವರು ರಿಪ್ಪನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada