ಮಹಿಳೆಯರಿಂದ ವೈನ್ ಶಾಪ್ ಬಂದ್

ಲಾಕ್ ಡೌನ್ ಸಮಯದಲ್ಲಿ ನೆಮ್ಮದಿಯಿಂದ ಇದ್ದ ಗ್ರಾಮಸ್ಥರಿಗೆ ಸಂಕಷ್ಟ ಬಂದೊದಗಿದೆ. ಕುಡಿತದಿಂದ  ಹೊಡೆದಾಟ, ಕೌಟುಂಬಿಕ  ದೌರ್ಜನ್ಯಗಳು ಹೆಚ್ಚಾಗುತ್ತಿರುವುದರಿಂದ ಮಹಿಳೆಯರು ಮದ್ಯದಂಗಡಿ ಬಂದ್ ಮಾಡುವಂತೆ  ಗಲಾಟೆ ಮಾಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ. ಮೊನ್ನೆಯಿಂದ ವೈನ್ ಶಾಪ್ ಆರಂಭವಾದ ಹಿನ್ನೆಲೆಯಲ್ಲಿ, ಮದ್ಯಪಾನ ಮಾಡಿ ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದಕ್ಕೆ ಗ್ರಾಮದ ಮಹಿಳೆಯರು ಒಂದಾಗಿ ಬಂದು ವೈನ್ ಶಾಪ್ ಮೇಲೆ ಕಲ್ಲು ತೂರಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆ ನಂತರ ಮದ್ಯದಂಗಡಿಯನ್ನ ಬಂದ್ ಮಾಡಿದ್ದರು.  ಅಲ್ಲಿ ಸೇರಿದ್ದ ಮಹಿಳೆಯರು ವೈನ್ ಶಾಪ್  ಓಪನ್ ಮಾಡದಂತೆ ಮಾಲೀಕರಿಗೆ ಎಚ್ಚರಿಕೆ  ನೀಡಿದರು.

ವರದಿ:ಸ್ಪೀಡ್ ನ್ಯೂಸ್  ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ

Fri May 8 , 2020
ಕುಡಿದ ಮತ್ತಿನಲ್ಲಿ ಜಗಳ ನಡೆದು ಸ್ನೇಹಿತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ದಲ್ಲಿ ನಡೆದಿದೆ. ಮಾರುತಿ ನಗರ ನಿವಾಸಿ ಪುರುಷೋತ್ತಮ್ (೩೪) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ವೆಲ್ಟಿಂಗ್ ಕೆಲಸ ಮಾಡುವ ಪುರುಷೋತ್ತಮ್ ಮತ್ತು ಗಿರೀಶ್ ಸ್ನೇಹಿತರಾಗಿದ್ದು, ನೆರೆ ಮನೆ ನಿವಾಸಿಗಳಾಗಿದ್ದಾರೆ. ಇಬ್ಬರು ಅವಿವಾಹಿತರಾಗಿದ್ದರು. ಅಂದು ಗಿರೀಶ್ ಮನೆಯಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಕುಡಿದ ಮತ್ತಿನಲ್ಲಿ […]

Advertisement

Wordpress Social Share Plugin powered by Ultimatelysocial