ಟಾಲಿವುಡ್ ನಟ ಚಿರಂಜೀವಿ ನಟನೆಯ ಆಚಾರ್ಯ ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ರೂಮರ್ ಟಾಲಿವುಡ್ನಲ್ಲಿ ಹರಿದಾಡಿತ್ತು. ಆದರೆ ಆ ಪಾತ್ರಕ್ಕೆ ಚಿರಂಜೀವಿ ಮಗ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗ ಖಚಿತವಾಗಿದೆ. ಆದರೆ ಟಾಲಿವುಡ್ನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.
ಮಹೇಶ್ ಬಾಬು ಅವರ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಹೊಸ ಚಿತ್ರದಲ್ಲಿ ರಾಮ್ ಚರಣ್ ನಾಯಕರಾಗಿ ನಟಿಸಲಿದ್ದಾರೆ. ನಿರ್ದೇಶಕ ವಂಶಿ ಪೈದಿಪಳ್ಳಿ ಕಥೆಯೊಂದನ್ನು ಮಹೇಶ್ ಬಾಬು ಅವರಿಗೆ ವಿವರಿಸಿದ್ದಾರೆ. ಕಥೆಯನ್ನು ಮಹೇಶ್ ಒಪ್ಪಿದ್ದಾರೆ.
ಮಹೇಶ್ ಬಾಬು ಗೀತಾ ಗೋವಿಂದA ಚಿತ್ರದ ನಿರ್ದೇಶಕ ಪರಶುರಾಮ್ ಜತೆಗೆ ಹೊಸ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ರಾಮ್ ಚರಣ್ ಮತ್ತು ವಂಶಿ ಈ ಹಿಂದೆ ಯೆವಡು ಚಿತ್ರದಲ್ಲಿ ಜತೆಯಾಗಿದ್ದರು. ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ. ಹಾಗೆಯೇ ರಾಮ್ ಚರಣ್ ಹಾಗೂ ಮಹೇಶ್ ಬಾಬು ಗೆಳೆತನವೂ ಚೆನ್ನಾಗಿದೆ. ಹೀಗಾಗಿ ಮೂವರು ಸಿನಿಮಾ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.
ಮಹೇಶ್ ಬಾಬು ಸಿನಿಮಾದಲ್ಲಿ ರಾಮ್ ಚರಣ್
Please follow and like us: