ನಾಳೆ ವಿಶ್ವ ತಂಬಾಕು ರಹಿತ ದಿನವಾದ ಹಿನ್ನಲೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ತಂಬಾಕು ನಿಷೇಧಿಸಿದೆ ಎಂಬ ಆದೇಶ ಹೊರಡಿಸಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು, ಮೇ ೩೧ರಂದು ಪ್ರತಿವರ್ಷ ವಿಶ್ವ ತಂಬಾಕು ರಹಿತ ದಿನ ಆಚರಣೆಯಾಗುತ್ತಿದೆ. ತಂಬಾಕು ಉದ್ಯಮಗಳ ಕುತಂತ್ರ ಹಾಗೂ ನಿಕೋಟಿನ್ ಬಳಕೆಯಿಂದ ಯುವ ಪೀಳಿಗೆಯ ರಕ್ಷಣೆ ಮಾಡಬೇಕು. ಇನ್ಮುಂದೆ ಕರ್ನಾಟಕದಲ್ಲಿ ಎಲ್ಲಿಯೂ ತಂಬಾಕು ಸಿಗುವುದಿಲ್ಲ. ಸರ್ಕಾರ ಇದರ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ ಎಂದರು. ರಾಜ್ಯದಲ್ಲಿ ವಿಶ್ವ ತಂಬಾಕು ರಹಿತ ದಿನ ಆಚರಣೆಯಾಗಬೇಕು. ರಾಜ್ಯದ ೩೦ಜಿಲ್ಲೆಗಳಲ್ಲಿ ತಂಬಾಕು ಪದಾರ್ಥಗಳನ್ನು ನಿಷೇಧಿಸಲಾಗಿದ್ದು, ಸ್ಟಾಪ್ ಟೋಬ್ಯಾಕೊ ಎಂಬ ಆ್ಯಪ್ ಕೂಡ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉಗಿಯುವುವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ರು.
ರಾಜ್ಯದಲ್ಲಿ ತಂಬಾಕು ಮಾರಾಟ ನಿಷೇಧ
Please follow and like us: