ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಮುಖ್ಯಸ್ಥ ಮಹಾಂತ್​ ನೃತ್ಯ ಗೋಪಾಲ್​ ದಾಸ್​ ಅಯೋಧ್ಯೆಯಲ್ಲಿ ಇಂದಿನಿಂದ ರಾಮಮಂದಿರ ನಿರ್ಮಾಣದ ಕಾಮಗಾರಿ ಕಾರ್ಯ ಪ್ರರಂಭವಾಗಿದೆ ಹೇಳಿಕೆ ನೀಡಿದ್ದಾರೆ.  ಈ ಕಾಮಗಾರಿ ವೇಳೆಯಲ್ಲಿ ಶಿವಲಿಂಗ ಸೇರಿದಂತೆ ವಿವಿಧ ಮಾದರಿಯ ಕಲ್ಲಿನ ಸ್ತಂಭಗಳು ಸಿಕ್ಕಿರುವುದರಿಂದ ಅವಷೇಶನಗಳನ್ನು ತೆಗೆಯುವ ಕೆಲಸ ಸಂಪೂರ್ಣವಾಗಿದೆ.ಇಲ್ಲಿಯವರೆಗೂ  ಮಂದಿರ ನಿರ್ಮಾಣದ ಸ್ಥಳದಲ್ಲಿ ಭೂಮಿ ಸಮಮಟ್ಟ ಮಾಡುವ ಕಾರ್ಯ ನಡೆಯುತಿತ್ತು. ಮಾನಸಭವನದಲ್ಲಿರುವ ರಾಮಲಲ್ಲಾ ಹಾಗೂ ಬಾಲರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮಂದಿರ ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಇನ್ನೂ ಲಾಕ್ಡೌನ್​ ಅವಧಿಯಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಸುಮಾರು 4.6 ಕೋಟಿ ರೂಪಾಯಿ ದೇಣಿಗೆ ಸಂದಾಯವಾಗಿದೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿಂದು 100 ಕೊರೊನಾ ಪಾಸಿಟಿವ್

Tue May 26 , 2020
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ 100 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮಹಾಮಾರಿ ಸೋಂಕಿತರ ಸಂಖ್ಯೆರಾಜ್ಯದಲ್ಲಿ  2282 ಕ್ಕೆ ಏರಿಕೆಯಯಾಗಿದೆ. ಕೆಲ ದಿನಗಳಿಂದ ಪ್ರತಿನಿತ್ಯ ಕನಿಷ್ಟ 100 ಪ್ರಕರಣಗಳು ಪತ್ತೆಯಾಗುತ್ತಿದೆ.ಇಂದು ರಾಜ್ಯದಲ್ಲಿ ಯಾದಗಿರಿ-14,ಹಾಸನ-13, ಬೆಳಗಾವಿ – 13, ದಾವಣಗೆರೆ – 10, ಬೀದರ್ – 10‌ ಪ್ರಕರಣಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇನ್ನು ಸಂಜೆ ಎಷ್ಟು ಪ್ರಕರಣಗಳು ಪತ್ತೆಯಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ. Please follow […]

Advertisement

Wordpress Social Share Plugin powered by Ultimatelysocial