ದೇಶದಾದ್ಯಂತ ಕೋವಿಡ್ 19 ನಿಂದ ಜನತೆ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು ನಮ್ಮ ರಾಜ್ಯದಲ್ಲೂ ಕೂಡ ಬಡವರಿಗೆ ಜೀವನಕ್ಕೆ ಅಗತ್ಯ ವಸ್ತುಗಳನ್ನು ಕೊಳ್ಳಲು ಕಷ್ಟವಾದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರು ಡಿ ಕೆ ಶಿವಕುಮಾರ್ ಅವರ ಆದೇಶದಂತೆ ಮೇರೆಗೆ ಪರಿಹಾರ ನಿಧಿ ಸ್ಥಾಪಿಸಿದ್ದು ಪಕ್ಷದ ಶಾಸಕರೆಲ್ಲ ತಮ್ಮ ದೇಣಿಗೆಯನ್ನು ನೀಡಿದ್ದು ಅದೇ ರೀತಿ ಗಣಿನಾಡು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ರವರು ಇಂದು ಬಳ್ಳಾರಿ ನಗರದಲ್ಲಿ ಕಂಟೋನ್ಮೆಂಟ್ ಪ್ರದೇಶದ ಜಿಲ್ಲಾ ಕಾಂಗ್ರೆಸ್ ಸಮಿತಿಯ (Dcc) ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ರಫೀಕ್ ಮುಖಾಂತರ 2 ಲಕ್ಷ ರೂಪಾಯಿಗಳ ಚೆಕ್ ಹಸ್ತಾತರಿಸಿ ನಂತರ ಮಾತನಾಡಿದ ಅವರು ನಾನು ಈಗಾಗಲೇ ನನ್ನ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ತೆರಳಿ ತುಂಬಾ ಕೋವಿಡ್ 19 ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದು ಮತ್ತು ಅವರಿಗೆ ಮಾಸ್ಕ್ ಮತ್ತು ರೇಷನ್ ಕಿಟ್ ವಿತರಣೆ ಮಾಡಲಾಗಿದೆ ನನ್ನ ಕ್ಷೇತ್ರದ ಜನರ ನೆರವಿಗಾಗಿ ಸಹಾಯವಾಣಿ ಕೂಡ ಆರಂಭಿಸಲಾಗಿದೆ ನಾನು ನನ್ನ ಜನರೊಂದಿಗೆ 24 ಗಂಟೆಗಳ ಕಾಲ ಸಹಾಯ ಆಗಲು ಸಿದ್ದನಿದ್ದೇನೆ ಹೇಳಿದರು