ನ್ಯೂಯಾರ್ಕ್: ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಆಧಾರ್ ಕಾರ್ಡ್ ಮೂಲಕ ನೇರ ಹಣ ವರ್ಗಾವಣೆ ಮಾಡುವ ಇಂಡಿಯಾ ಸ್ಟ್ಯಾಕ್ ಅಥವಾ ಇಂಟರೋಪಿರೇಬಲ್ ಸಾಫ್ಟ್ವೇರ್ ಕೊರೊನಾ ಭೀತಿಯ ನಡುವೆ ಜನರು ಧೀರ್ಘ ಸಮಯ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಡೆದಿದೆ ಎಂದು ಮೈ ಗವರ್ನಮೆಂಟ್ ಮತ್ತು ಡಿಜಿಟಲ್ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಅರವಿಂದ್ ಗುಪ್ತಾ ತಿಳಿಸಿದ್ದಾರೆ. ಸದ್ಯ ಲಭ್ಯವಿರುವ ಅಂಕಿಅAಶಗಳ ಪ್ರಕಾರ, ಏಪ್ರಿಲ್ ೨೨ ರ ಹೊತ್ತಿಗೆ, ೩೩೦ ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸರ್ಕಾರ ೩೧,೨೩೫ ಕೋಟಿ ರೂ. ಪಾವತಿಸಿದೆ. ಅಲ್ಲದೆ, ಇಂಡಿಯಾ ಸ್ಟ್ಯಾಕ್ಗೆ ಹತ್ತು ಪಟ್ಟು ಲಾಭವೂ ದೊರೆತಿದೆ ಎಂದು ಅವರು ಹೇಳಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಗುಪ್ತಾ, ಕೋವಿಡ್-೧೯ ಬಳಿಕ ಇಂಡಿಯಾ ಸ್ಟ್ಯಾಕ್ ಯಾವ ರೀತಿ ಅಭಿವೃದ್ದಿ ಹೊಂದಬಹುದು ಎಂಬವುದರ ಬಗ್ಗೆ ಮಾಹಿತಿ ನೀಡಿದ್ದು, ಭಾರತವು ತನ್ನ ಡಿಜಿಟಲ್ ಗುರಿಯ ಮೇಲೆ ಹಿಡಿತ ಸಾಧಿಸಿದೆ, ಡಿಜಿಟಲ್ ಪಾವತಿಯನ್ನು ಬೆಂಬಲಿಸುವ ಇಂಡಿಯಾ ಸ್ಟ್ಯಾಕ್ನ ಪೇಪರ್ಲೆಸ್ ಲೇಯರ್ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಡಿಜಿಟಲೈಸ್ ಮಾಡುವಲ್ಲಿ ಸಹಕಾರಿಯಾಗಿದೆ ಎಂದಿದ್ದಾರೆ. ಆಧಾರ್ ಬಳಸಿ ನೇರ ಹಣ ಪಾವತಿ ಮಾಡುವುದರ ಮೂಲಕ ಏಪ್ರಿಲ್ ೨೨ ರ ಹೊತ್ತಿಗೆ, ೩೩೦ ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸರ್ಕಾರ ೩೧,೨೩೫ ಕೋಟಿ ರೂ. ಪಾವತಿಸಿದೆ.
ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪು
Please follow and like us: