ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪು

ನ್ಯೂಯಾರ್ಕ್: ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಆಧಾರ್ ಕಾರ್ಡ್ ಮೂಲಕ ನೇರ ಹಣ ವರ್ಗಾವಣೆ ಮಾಡುವ ಇಂಡಿಯಾ ಸ್ಟ್ಯಾಕ್ ಅಥವಾ ಇಂಟರೋಪಿರೇಬಲ್ ಸಾಫ್ಟ್ವೇರ್ ಕೊರೊನಾ ಭೀತಿಯ ನಡುವೆ ಜನರು ಧೀರ್ಘ ಸಮಯ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಡೆದಿದೆ ಎಂದು ಮೈ ಗವರ್ನಮೆಂಟ್ ಮತ್ತು ಡಿಜಿಟಲ್ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಅರವಿಂದ್ ಗುಪ್ತಾ ತಿಳಿಸಿದ್ದಾರೆ. ಸದ್ಯ ಲಭ್ಯವಿರುವ ಅಂಕಿಅAಶಗಳ ಪ್ರಕಾರ, ಏಪ್ರಿಲ್ ೨೨ ರ ಹೊತ್ತಿಗೆ, ೩೩೦ ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸರ್ಕಾರ ೩೧,೨೩೫ ಕೋಟಿ ರೂ. ಪಾವತಿಸಿದೆ. ಅಲ್ಲದೆ, ಇಂಡಿಯಾ ಸ್ಟ್ಯಾಕ್‌ಗೆ ಹತ್ತು ಪಟ್ಟು ಲಾಭವೂ ದೊರೆತಿದೆ ಎಂದು ಅವರು ಹೇಳಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಗುಪ್ತಾ, ಕೋವಿಡ್-೧೯ ಬಳಿಕ ಇಂಡಿಯಾ ಸ್ಟ್ಯಾಕ್ ಯಾವ ರೀತಿ ಅಭಿವೃದ್ದಿ ಹೊಂದಬಹುದು ಎಂಬವುದರ ಬಗ್ಗೆ ಮಾಹಿತಿ ನೀಡಿದ್ದು, ಭಾರತವು ತನ್ನ ಡಿಜಿಟಲ್ ಗುರಿಯ ಮೇಲೆ ಹಿಡಿತ ಸಾಧಿಸಿದೆ, ಡಿಜಿಟಲ್ ಪಾವತಿಯನ್ನು ಬೆಂಬಲಿಸುವ ಇಂಡಿಯಾ ಸ್ಟ್ಯಾಕ್‌ನ ಪೇಪರ್‌ಲೆಸ್ ಲೇಯರ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಡಿಜಿಟಲೈಸ್ ಮಾಡುವಲ್ಲಿ ಸಹಕಾರಿಯಾಗಿದೆ ಎಂದಿದ್ದಾರೆ. ಆಧಾರ್ ಬಳಸಿ ನೇರ ಹಣ ಪಾವತಿ ಮಾಡುವುದರ ಮೂಲಕ ಏಪ್ರಿಲ್ ೨೨ ರ ಹೊತ್ತಿಗೆ, ೩೩೦ ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸರ್ಕಾರ ೩೧,೨೩೫ ಕೋಟಿ ರೂ. ಪಾವತಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕಳಪೆ ಬೀಜ ಖರೀದಿಸಬಾರದು, ಇದು ಆತ್ಮಹತ್ಯೆಗೆ ಸಮಾನ:ಬಿ.ಸಿ.ಪಾಟೀಲ್

Wed Apr 29 , 2020
ಕಡಿಮೆ ಬೆಲೆಗೆ ಬಿತ್ತನೆ ಬೀಜ ಸಿಗುತ್ತದೆ ಎಂಬ ಆಸೆಗೆ ಬಿದ್ದು ರೈತರು ಕಳಪೆ ಬೀಜಗಳನ್ನು ಖರೀದಿಸಬಾರದು. ಇದು ಆತ್ಮಹತ್ಯೆಗೆ ಸಮಾನ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ  ಮಾತನಾಡಿದ ಅವರು,’ಇನ್ನೇನು ಮುಂಗಾರು ಪ್ರಾರಂಭವಾಗುತ್ತಿದೆ. ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಎಲ್ಲವೂ ಸಿಗಲಿವೆ’. ‘ಸರ್ಕಾರ ನಿಗದಿಮಾಡಿರುವ ದರದಲ್ಲೇ ಕೃಷಿ ಉತ್ಪನ್ನಗಳ ಮಾರಾಟ ನಡೆಯಬೇಕು. ಪ್ರತಿ ಉತ್ಪನ್ನಗಳ ದರ ಪಟ್ಟಿಯನ್ನು ರೈತ ಸಂಪರ್ಕ […]

Advertisement

Wordpress Social Share Plugin powered by Ultimatelysocial