ಶಾಸಕ ಶಿವಲಿಂಗೇಗೌಡರು ಗ್ರಾಮೀಣ ಶೈಲಿಯ ಮಾತುಗಾರಿಕೆಗೆ ಪ್ರಸಿದ್ಧಿ..! ಸದನದ ಕಲಾಪ ವಿರಲಿ ಅಥವಾ ಗ್ರಾಮದಲ್ಲಿ ಭಾಷಣವೇ ಆಗಿರಲಿ ಜನರನ್ನು ತಮ್ಮತ್ತ ಸೆಳೆಯುವಲ್ಲಿ ವಿಭಿನ್ನ ಛಾಪು ಮೂಡಿಸುತ್ತಾರೆ. ಹಾಸನದಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ನಮ್ಮಿಂದ ನಿಮಗೆ ಅಗತ್ಯ ನೆರವು ಸಿಗಲಿದೆ ‘ಹೇಗೋ …’ ಕೆಲದಿನಗಳ ಕಾಲ ಸರ್ಕಾರ ನೀಡುವ ಅಕ್ಕಿಯಿಂದ ಇಡ್ಲಿ-ದೋಸೆ ಮಾಡಿಕೊಂಡು ತಿಂದು ಕಾಲ ಕಳೆಯಿರಿ ಮುಂದಿನ ದಿನಗಳಲ್ಲಿ ತಿಂಗಳಿಗೆ ದುಪ್ಪಟ್ಟು ಸಂಪಾದನೆ ಮಾಡುವಿರಂತೆ’ ಎಂದು ತಮ್ಮದೇ ಶೈಲಿಯಲ್ಲಿ ಜನರ ಮನಮುಟ್ಟುವಂತೆ ಸಲಹೆ ನೀಡಿದರು.. ಅಮೆರಿಕದ ಅಧ್ಯಕ್ಷ ಟ್ರಂಪ್ ಮಾಡಿದ ಎಡವಟ್ಟಿನಿಂದ ಇಂದು ಸಾವಿರ ಜನ ಸಾವಿಗಿಡಾಗಿದ್ದು; ಲಕ್ಷಾಂತರ ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇಟಲಿ ಹಾಗೂ ಜರ್ಮನಿಯಲ್ಲಿ ಸರಿಯಾದ ಕಾಲಕ್ಕೆ ಲಾಕ್ ಡೌನ್ ಮಾಡದ ಹಿನ್ನೆಲೆ ಸಾವಿರಾರು ಜನ ಪ್ರಾಣ ತೆತ್ತಿದ್ದಾರೆ. ಆದರೆ ಭಾರತದಲ್ಲಿ ಲಾಕ್ ಡೌನ್ ಮಾಡಿದ ಕಾರಣ ಸಾವಿನ ಪ್ರಮಾಣ ತೀರಾ ಕಡಿಮೆಯಾಗಿದೆ .ಇಂದೇ ಲಾಕ್ ಡೌನ್ ಸಡಿಲಿಸಿ ಬಸ್ ವಿಮಾನ ಬಿಡಿ ಎಂದು ಹಟ ಮಾಡದೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಸರ್ಕಾರ ನೀಡುವ ಅಕ್ಕಿಯಿಂದ ಇಡ್ಲಿ-ದೋಸೆ ಮಾಡಿಕೊಂಡು ತಿಂದು ಕಾಲ ಕಳೆಯಿರಿ: ಶಿವಲಿಂಗೇಗೌಡರು
Please follow and like us: