ಸರ್ಕಾರ ನೀಡುವ ಅಕ್ಕಿಯಿಂದ ಇಡ್ಲಿ-ದೋಸೆ ಮಾಡಿಕೊಂಡು ತಿಂದು ಕಾಲ ಕಳೆಯಿರಿ: ಶಿವಲಿಂಗೇಗೌಡರು

ಶಾಸಕ ಶಿವಲಿಂಗೇಗೌಡರು ಗ್ರಾಮೀಣ ಶೈಲಿಯ ಮಾತುಗಾರಿಕೆಗೆ ಪ್ರಸಿದ್ಧಿ..! ಸದನದ ಕಲಾಪ ವಿರಲಿ ಅಥವಾ ಗ್ರಾಮದಲ್ಲಿ ಭಾಷಣವೇ ಆಗಿರಲಿ ಜನರನ್ನು ತಮ್ಮತ್ತ ಸೆಳೆಯುವಲ್ಲಿ ವಿಭಿನ್ನ ಛಾಪು ಮೂಡಿಸುತ್ತಾರೆ. ಹಾಸನದಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ನಮ್ಮಿಂದ ನಿಮಗೆ ಅಗತ್ಯ ನೆರವು ಸಿಗಲಿದೆ ‘ಹೇಗೋ …’ ಕೆಲದಿನಗಳ ಕಾಲ ಸರ್ಕಾರ ನೀಡುವ ಅಕ್ಕಿಯಿಂದ ಇಡ್ಲಿ-ದೋಸೆ ಮಾಡಿಕೊಂಡು ತಿಂದು ಕಾಲ ಕಳೆಯಿರಿ ಮುಂದಿನ ದಿನಗಳಲ್ಲಿ ತಿಂಗಳಿಗೆ ದುಪ್ಪಟ್ಟು ಸಂಪಾದನೆ ಮಾಡುವಿರಂತೆ’ ಎಂದು ತಮ್ಮದೇ ಶೈಲಿಯಲ್ಲಿ ಜನರ ಮನಮುಟ್ಟುವಂತೆ ಸಲಹೆ ನೀಡಿದರು.. ಅಮೆರಿಕದ ಅಧ್ಯಕ್ಷ ಟ್ರಂಪ್ ಮಾಡಿದ ಎಡವಟ್ಟಿನಿಂದ ಇಂದು ಸಾವಿರ ಜನ ಸಾವಿಗಿಡಾಗಿದ್ದು; ಲಕ್ಷಾಂತರ ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇಟಲಿ ಹಾಗೂ ಜರ್ಮನಿಯಲ್ಲಿ ಸರಿಯಾದ ಕಾಲಕ್ಕೆ ಲಾಕ್ ಡೌನ್ ಮಾಡದ ಹಿನ್ನೆಲೆ ಸಾವಿರಾರು ಜನ ಪ್ರಾಣ ತೆತ್ತಿದ್ದಾರೆ. ಆದರೆ ಭಾರತದಲ್ಲಿ ಲಾಕ್ ಡೌನ್ ಮಾಡಿದ ಕಾರಣ ಸಾವಿನ ಪ್ರಮಾಣ ತೀರಾ ಕಡಿಮೆಯಾಗಿದೆ .ಇಂದೇ ಲಾಕ್ ಡೌನ್‌ ಸಡಿಲಿಸಿ ಬಸ್ ವಿಮಾನ ಬಿಡಿ ಎಂದು ಹಟ ಮಾಡದೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.

Please follow and like us:

Leave a Reply

Your email address will not be published. Required fields are marked *

Next Post

ಮದ್ಯಪಾನ ನಿಷೇಧಿಸುವುದು ಅತ್ಯವಶ್ಯಕ :ಹೆಚ್ ಕೆ ಪಾಟೀಲ್

Fri May 1 , 2020
ಲಾಕ್​ಡೌನ್ ಹಿನ್ನೆಲೆ ಮದ್ಯ ಮಾರಾಟ 48 ದಿನಗಳಿಂದ ನಿಂತಿದೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ವೆದೇವೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಜನರ ಸಂಕಷ್ಟ ಕುರಿತು ಸಿಎಂಗೆ ಪತ್ರ ಬರೆದ ಅವರು, ಇದೇ ಅವಕಾಶ ಬಳಸಿ ರಾಜ್ಯದಲ್ಲಿ ಪೂರ್ಣ ಮದ್ಯಪಾನ ನಿಷೇಧ ಜಾರಿಗೆ ತನ್ನಿ. ಮದ್ಯಪಾನವನ್ನು ಚಟವಾಗಿ ಮಾಡಿಕೊಂಡವರು ಸ್ವಲ್ಪ‌‌‌ ದಿನ ಕಷ್ಟಪಟ್ಟರೂ ಇದೀಗ ಸಾರಾಯಿ ಇಲ್ಲದೆ ಬದುಕುತ್ತಿದ್ದಾರೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದು, […]

Advertisement

Wordpress Social Share Plugin powered by Ultimatelysocial