ದಾವಣಗೆರೆ, ಅಕ್ಟೋಬರ್ 02: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹುಡುಗರು ಇನ್ನು ಮುಂದೆ ಯುವತಿಯರನ್ನು ಚುಡಾಯಿಸುವ ಮುನ್ನ ಹುಷಾರಾಗಿರಬೇಕು. ಹುಡುಗಿಯರ ತಂಟೆಗೆ ಹೋದರೆ ತಂಟೆಕೋರ ಹುಡುಗರಿಗೆ ಕಾದಿದೆ ಮಾರಿ ಹಬ್ಬ. ಹುಡುಗಿಯರನ್ನು ಚುಡಾಯಿಸುವ ಪುಂಡಪೋಕರಿಗಳನ್ನು ಮಟ್ಟ ಹಾಕಲೆಂದೇ ಹೊಸ ಪಡೆಯೊಂದು ಇದೀಗ ರಸ್ತೆಗಿಳಿದಿದೆ. ಹುಡುಗರ ಪುಂಡಾಟಿಕೆಗಳಿಗೆ ಬ್ರೇಕ್ ಹಾಕುವ ಮೂಲಕ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಲು ಈ ಪಡೆ ಸಜ್ಜುಗೊಂಡಿದೆ. ಅದೇ ದುರ್ಗಾ ಪಡೆ. ಕೆಲ ಯುವಕರು ಗುಂಪು ಕಟ್ಟಿಕೊಂಡು ಶಾಲಾ ಕಾಲೇಜು, ಬಸ್ಸ್ಟ್ಯಾಂಡ್, ಜನನಿಬೀಡ ಪ್ರದೇಶಗಳಲ್ಲಿ ಯುವತಿಯರನ್ನು ರೇಗಿಸುವುದು ನಗರದಲ್ಲಿ ಹೆಚ್ಚಾಗುತ್ತಿದೆ. ಇಂತಹ ಗುಂಪುಗಳನ್ನು ಮಟ್ಟ ಹಾಕಲೆಂದೇ ದುರ್ಗಾ ಪಡೆ ಸಜ್ಜಾಗಿದೆ. ಪುಂಡ ಯುವಕರಿಗೆ ಕಡಿವಾಣ ಹಾಕುವುದು, ಯುವತಿಯರಿಗೆ, ಮಹಿಳೆಯರಿಗೆ ರಕ್ಷಣೆ ನೀಡುವುದು ದುರ್ಗಾ ಪಡೆಯ ಕಾರ್ಯ. ದುರ್ಗಾ ಪಡೆಯಲ್ಲಿ ಎಎಸ್ಐ ಸೇರಿದಂತೆ 15 ಜನ ಸಿಬ್ಬಂದಿಗಳಿದ್ದು ದಾವಣಗೆರೆ ನಗರದಾದ್ಯಂತ ಈ ವಾಹನ ಗಸ್ತು ತಿರುಗಲಿದೆ.
ಹುಡುಗಿಯರ ಚುಡಾಯಿಸುವ ಪೋಕರಿಗಳ ಹೆಡೆ-ಮುರಿ ಕಟ್ಟಲಿರುವ ದುರ್ಗೆಯರು
Please follow and like us: