ಅಥಣಿ ಪಟ್ಟಣದ ಬಾಬು ಜಗಜಿವನರಾಮ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮಲ್ಲಿ ಡಾ ಬಾಬು ಜಗಜಿವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ದಿಂದ 400 ಫಲಾನುಭವಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಅನುದಾನವನ್ನ ಚಕ್ ಮೂಲಕ ಶಾಸಕ ಮಹೇಶ್ ಕುಮಠಳ್ಳಿ ಫಲಾನುಭವಿಗಳಿಗೆ ವಿತರಿಸಿದರು
ನಂತರ ಮಾಧ್ಯಮದೊಂದಿಗೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮಾತನಾಡಿ ಬಾಬು ಜಗಜಿವನರಾಮ್ ಕೈಗಾರಿಕಾ ಅಭಿವೃದ್ಧಿ ನಿಗಮ ದಿಂದ ನಾಲ್ಕು ಕೋಟಿ ರೂಪಾಯಿ ಅನುದಾನ ದಲ್ಲಿ ನಾಲ್ಕುನೂರು ಫಲಾನುಭವಿಗಳನ್ನೂ ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು
ಇನ್ನೂ ಕೆರೆ ಅಭಿವೃದ್ಧಿಯಲ್ಲಿ ಗುತ್ತಿಗೆದಾರರ ಕಳಪೆ ಕಾಮಗಾರಿ ಮಾಡಿದ ಪರಿಣಾಮ ನಿರ್ಮಾಣ ಹಂತದಲ್ಲೆ ತಡೆಗೋಡೆ ಕುಸಿದುಬಿದ್ದಿದೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಪುರಸಭೆ ಮುಖ್ಯಾಧಿಕಾರಿ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದಾರೆ ಕುಸಿದು ಬಿದ್ದ ತಡೆಗೋಡೆಯನ್ನ ಗುತ್ತಿಗೆದಾರರ ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಕೊಡುವುದಾಗಿ ಹೆಳಿದ್ದಾರೆ ಎಂದು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನನ್ನ ಸಮರ್ಥಿಸಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
ಇದೆ ಸಂದರ್ಭದಲ್ಲಿ ಹರಳಯ್ಯಾ ಸಮಾಜ ಮುಖಂಡರಾದ ಡಾ” ಅನೀಲ್ ಸೌದಾಗರ, ದಿಲೀಪ ಕಾಂಬಳೆ,ಶಿವಾನಂದ ಸೌದಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು