ಬೆಂಗಳೂರು:’ಆರ್ಕೆಸ್ಟ್ರಾ ಮೈಸೂರು’ ಸಿನಿಮಾಗೆ ಕನ್ನಡ ಪ್ರೇಕ್ಷಕರಿಂದ ಸರಿಯಾದ ಬೆಂಬಲ ಸಿಗದ ಹಿನ್ನೆಲೆ ಖ್ಯಾತ ಗಾಯಕ ಮತ್ತು ಸಂಗೀತ ಟ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಹೊಸಬರ ಪ್ರಯತ್ನಗಳಿಗೆ ಕನ್ನಡಿಗರ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
‘ಸುಮಾರು 5 ವರ್ಷಗಳಿಂದ ನಾವು ಮೈಸೂರಿನ ಹುಡುಗರು ಸೇರಿಕೊಂಡು ಉತ್ತಮ ಸಿನಿಮಾ ಮಾಡಿದ್ದೇವೆ. ನಾವು ಬೆಳೆದು ಬಂದಂತಹ ಸಂಸ್ಕೃತಿಯ ಬಗ್ಗೆ ಮೈಸೂರಿನಲ್ಲಿಯೇ ಚಿತ್ರೀಕರಣ ಮಾಡಿ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ನಿರ್ಮಿಸಿದ್ದೇವೆ. ಈ ಸಿನಿಮಾಗೆ ಚಿಕ್ಕ ವಯಸ್ಸಿನ ಹುಡುಗ ಅಶ್ವಿನ್ ವಿಜಯ್ಕುಮಾರ್ ದೊಡ್ಡ ಜವಾಬ್ದಾರಿ ಹೊತ್ತು ಬಂಡವಾಳ ಹೂಡಿದ್ದಾರೆ. ನಮ್ಮ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಜನವರಿ 12ಕ್ಕೆ ಬಿಡುಗಡಯಾದ ದಿನದಿಂದಲೂ ಚಿತ್ರ ನೋಡಿದವರೆಲ್ಲರೂ ಅದ್ಭುತವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ವಿಮರ್ಶೆ ವ್ಯಕ್ತವಾಗಿದೆ. ಚಿತ್ರ ವಿಮರ್ಶಕರು ಸಹ ಉತ್ತಮವಾಗಿ ಮಾತನಾಡಿದ್ದಾರೆ. ನಾವೆಲ್ಲರೂ ಸೇರಿ ಒಂದು ಸದಭಿರುಚಿಯ ಸಿನಿಮಾ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
‘ಸ್ಕ್ರಿಪ್ಟ್ ಸರಿಯಿಲ್ಲದಿದ್ದರೆ ನಾನು ಆ ಸಿನಿಮಾದ ಜೊತೆಗೆ ಕೆಲಸವನ್ನೇ ಮಾಡುವುದಿಲ್ಲ. ನಾನು ಚೂಸಿ ಆಗರುವುದರಿಂದ 2 ವರ್ಷಕ್ಕೆ ಒಂದು ಸಿನಿಮಾಗೆ ಮ್ಯೂಸಿಕ್ ಡೈರೆಕ್ಟ್ ಮಾಡುತ್ತೇನೆ. ಆದರೆ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾಗಾಗಿ 6 ವರ್ಷಗಳ ಕಾಲ ನಾನು ಕೆಲಸ ಮಾಡಿದ್ದೇನೆ. ಈ ಸಿನಿಮಾದ ಕಥೆ ಕೇಳಿ ನಾನು ಫ್ರಿಯಾಗಿ ಮ್ಯೂಸಿಕ್ ಮಾಡುತ್ತೇನೆ ಅಂತಾ ಒಪ್ಪಿಕೊಂಡೆ. ಆದರೆ ಚಿತ್ರದ ನಿರ್ಮಾಪಕರು ತಮ್ಮ ದೊಡ್ಡ ಮನಸ್ಸಿನಿಂದ ನೀವು ಕೂಡ ಸಹ ನಿರ್ಮಾಪಕರಾಗಿ ಕೆಲಸ ಮಾಡಿ. ಲಾಭದಲ್ಲಿ ಪಾಲು ನೀಡುತ್ತೇನೆಂದು ನನಗೆ ಆಫರ್ ನೀಡಿದರು. ಮೈಸೂರಿನಲ್ಲಿ ನಡೆದ ‘ಆರ್ಕೆಸ್ಟ್ರಾ ಮೈಸೂರು’ ಪ್ರೀ ರಿಲೀಸ್ ಇವೆಂಟ್ನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬಿಡುಗಡೆಯಾದ ದಿನ ನಮ್ಮ ಚಿತ್ರಕ್ಕೆ ಸರಿಯಾದ ಬೆಂಬಲ ಸಿಕ್ಕಿಲ್ಲ. ಮೈಸೂರು ಮತ್ತು ಬೆಂಗಳೂರಿನ ಜನರು ನಮ್ಮ ಚಿತ್ರದ ಕೈಹಿಡಿಯಲಿಲ್ಲ’ವೆಂದು ರಘು ದಿಕ್ಷೀತ್ ಬೇಸರ ವ್ಯಕ್ತಪಡಿಸಿದ್ದಾರೆ.
https://play.google.com/store/apps/details?id=com.speed.newskannada