ಕಾಂಗ್ರೆಸ್ ನಿಂದ ಲೆಕ್ಕ ಕೊಡಿ ಅಭಿಯಾನ ವಿಚಾರದ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮೂಲಕ ಸಚಿವ ಬಿ ಸಿ ಪಾಟೀಲ್ ತಿರುಗೇಟು. ಕಾಂಗ್ರೆಸ್ ನವರ ಲೆಕ್ಕ ಕೊಡಿ ಅಭಿಯಾನ ರಾಜಕೀಯ ಪ್ರೇರಿತ ಅವರಿಗೆ ಕಳಕಳಿ ಇಲ್ಲ. ಲೆಕ್ಕ ಕೊಡಿ ಅಭಿಯಾನಕ್ಕಿಂತ ಕೊರೊನಾ ಬಗ್ಗೆ ಜಾಗೃತಿ ಮಾಡಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕಾಂಗ್ರೆಸ್ ಕೈ ಜೋಡಿಸಿ ಕೆಲಸ ಮಾಡಲಿ. ಹಾಗೆಯೇ ಕಾಂಗ್ರೆಸ್ ನವರು ಕೋವಿಡ್ ರಾಜಕಾರಣ ಮಾಡೋದು ಬೇಡ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ. ರಾಜ್ಯದಲ್ಲಿ ಕೊರೊನಾ ಹಬ್ಬಲು ತಬ್ಲೀಘಿಗಳು ಕಾರಣ ತಬ್ಲೀಘಿಗಳು ದೆಹಲಿಯಿಂದ ಬಂದು ಎಲ್ಲೆಲ್ಲೂ ಕೊರೊನಾ ಸೋಂಕು ಹಬ್ಬಿಸಿದ್ದರು ಅವರಿಗೆ ಕಾಂಗ್ರೆಸ್ ನ ಬೆಂಬಲ ಇದೆ. ತಬ್ಲೀಘಿಗಳು ದೆಹಲಿಯಿಂದ ಬಂದ ಕೂಡಲೇ ಟೆಸ್ಟ್ ಮಾಡಿಸ್ಕೊಂಡಿದ್ರೆ ಇಷ್ಟರ ಮಟ್ಟಿಗೆ ರಾಜ್ಯದಲ್ಲಿ ಕೊರೊನಾ ಹಬ್ಬುತ್ತಿರಲಿಲ್ಲ. ಕಾಂಗ್ರೆಸ್ ನಿಂದಲೇ ಕೊರೊನಾ ಜಾಸ್ತಿಯಾಗಿದೆ. ಕಾಂಗ್ರೆಸ್ ನ್ನು ಕೊರೊನಾ ಕಾಂಗ್ರೆಸ್ ಎಂದು ಕರೀಬೇಕು. ಈಗಲಾದರೂ ರಾಜಕೀಯ ಮಾಡೋದು ಬಿಟ್ಟು ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಿಂದಲೇ ಕೊರೊನಾ ಜಾಸ್ತಿಯಾಗ್ತಿದೆ
Please follow and like us: