ಕಾಂಗ್ರೆಸ್ ನಿಂದಲೇ ಕೊರೊನಾ ಜಾಸ್ತಿಯಾಗ್ತಿದೆ

ಕಾಂಗ್ರೆಸ್ ನಿಂದ ಲೆಕ್ಕ ಕೊಡಿ ಅಭಿಯಾನ ವಿಚಾರದ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮೂಲಕ ಸಚಿವ ಬಿ ಸಿ ಪಾಟೀಲ್ ತಿರುಗೇಟು. ಕಾಂಗ್ರೆಸ್ ನವರ ಲೆಕ್ಕ ಕೊಡಿ ಅಭಿಯಾನ ರಾಜಕೀಯ ಪ್ರೇರಿತ ಅವರಿಗೆ ಕಳಕಳಿ ಇಲ್ಲ.  ಲೆಕ್ಕ ಕೊಡಿ ಅಭಿಯಾನಕ್ಕಿಂತ ಕೊರೊನಾ ಬಗ್ಗೆ ಜಾಗೃತಿ ಮಾಡಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕಾಂಗ್ರೆಸ್ ಕೈ ಜೋಡಿಸಿ ಕೆಲಸ ಮಾಡಲಿ. ಹಾಗೆಯೇ ಕಾಂಗ್ರೆಸ್ ನವರು ಕೋವಿಡ್ ರಾಜಕಾರಣ ಮಾಡೋದು ಬೇಡ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ. ರಾಜ್ಯದಲ್ಲಿ ಕೊರೊನಾ ಹಬ್ಬಲು ತಬ್ಲೀಘಿಗಳು ಕಾರಣ ತಬ್ಲೀಘಿಗಳು ದೆಹಲಿಯಿಂದ ಬಂದು ಎಲ್ಲೆಲ್ಲೂ ಕೊರೊನಾ ಸೋಂಕು ಹಬ್ಬಿಸಿದ್ದರು ಅವರಿಗೆ ಕಾಂಗ್ರೆಸ್ ನ ಬೆಂಬಲ ಇದೆ. ತಬ್ಲೀಘಿಗಳು ದೆಹಲಿಯಿಂದ ಬಂದ ಕೂಡಲೇ ಟೆಸ್ಟ್ ‌ಮಾಡಿಸ್ಕೊಂಡಿದ್ರೆ ಇಷ್ಟರ ಮಟ್ಟಿಗೆ ರಾಜ್ಯದಲ್ಲಿ ಕೊರೊನಾ ಹಬ್ಬುತ್ತಿರಲಿಲ್ಲ. ಕಾಂಗ್ರೆಸ್ ನಿಂದಲೇ ಕೊರೊನಾ ಜಾಸ್ತಿಯಾಗಿದೆ. ಕಾಂಗ್ರೆಸ್ ನ್ನು ಕೊರೊನಾ ಕಾಂಗ್ರೆಸ್ ಎಂದು ಕರೀಬೇಕು. ಈಗಲಾದರೂ ರಾಜಕೀಯ ಮಾಡೋದು ಬಿಟ್ಟು ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಡಾ ಬಿ.ಆರ್ ಅಂಬೇಡ್ಕರ್ ಮನೆ ಮೇಲೆ ದಾಳಿ

Sat Jul 11 , 2020
ಮಹಾರಾಷ್ಟ್ರದ ಡಾ ಬಿ.ಆರ್ ಅಂಬೇಡ್ಕರ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುತ್ತಾರೆ. ಇದನ್ನು ಖಂಡಿಸಿ ಆಲೂರು ತಾಲ್ಲೂಕಿನ ಡಿಎಸ್ಎಸ್ ಮುಖಂಡರಾದ ಬಸವರಾಜ ಹಾಗೂ ಎಲ್ಲಾ ತಾಲ್ಲೂಕಿನ ದಲಿತ ಮುಖಂಡರುಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಹಾಗೆಯೇ ಕಿಡಿಗೇಡಿಗಳ ವಿರುದ್ದ ಧಿಕ್ಕಾರ ಕೂಗಿ ಅಂಬೇಡ್ಕರ್ ವಸತಿಗೆ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂದಿಸಬೇಕು. ಅಲ್ಲದೇ ಅವರುಗಳನ್ನು ಗಡಿಪಾರು ಮಾಡಬೇಕೆಂದು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅರಸಯ್ಯ,ರಂಗಯ್ಯ ಹಾಗೂ […]

Advertisement

Wordpress Social Share Plugin powered by Ultimatelysocial