ಡಾ ಬಿ.ಆರ್ ಅಂಬೇಡ್ಕರ್ ಮನೆ ಮೇಲೆ ದಾಳಿ

ಮಹಾರಾಷ್ಟ್ರದ ಡಾ ಬಿ.ಆರ್ ಅಂಬೇಡ್ಕರ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುತ್ತಾರೆ. ಇದನ್ನು ಖಂಡಿಸಿ ಆಲೂರು ತಾಲ್ಲೂಕಿನ ಡಿಎಸ್ಎಸ್ ಮುಖಂಡರಾದ ಬಸವರಾಜ ಹಾಗೂ ಎಲ್ಲಾ ತಾಲ್ಲೂಕಿನ ದಲಿತ ಮುಖಂಡರುಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಹಾಗೆಯೇ ಕಿಡಿಗೇಡಿಗಳ ವಿರುದ್ದ ಧಿಕ್ಕಾರ ಕೂಗಿ ಅಂಬೇಡ್ಕರ್ ವಸತಿಗೆ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂದಿಸಬೇಕು. ಅಲ್ಲದೇ ಅವರುಗಳನ್ನು ಗಡಿಪಾರು ಮಾಡಬೇಕೆಂದು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅರಸಯ್ಯ,ರಂಗಯ್ಯ ಹಾಗೂ ಬಸವರಾಜು ಮತ್ತು ಇನ್ನಿತರ ಮುಖಂಡರುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಮಾತನಾಡಿದ ಬಸವರಾಜ್ ಅವರು ಡಾ ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಮನವಿ ಮಾಡಿದರು

Please follow and like us:

Leave a Reply

Your email address will not be published. Required fields are marked *

Next Post

ಎರಡು ದಿನ ಲಾಕ್ಡೌನ್ ಅಗತ್ಯ ಇಲ್ಲ

Sat Jul 11 , 2020
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಕೃಷಿ ಸಚಿವ ಬಿ ಸಿ ಪಾಟೀಲ್ ಕೃಷಿ ವಿವಿ ವಿದ್ಯಾರ್ಥಿಗಳ ಅಂತಿಮ‌ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ಪಿಹೆಚ್ ಡಿ, ಎಂಎಸ್ ಸಿ, ಪರೀಕ್ಷೆಗಳು ಆಗಸ್ಟ್ ವರೆಗೂ ಇಲ್ಲ ಎಂದು ಹೇಳಿದ್ದಾರೆ. ಹಾಗೂ ಕೊಪ್ಪಳಕ್ಕೆ ಹೊರರಾಜ್ಯ,ಜಿಲ್ಲೆಯಿಂದ ಬರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ್ದೇವೆ. ಕೊಪ್ಪಳಕ್ಕೆ ಬರೋರು ಮೊದಲು ಕೊರೋನಾ ಟೆಸ್ಟ್ ಗೆ ಒಳಗಾಗಬೇಕು ಟೆಸ್ಟ್ ರಿಸಲ್ಟ್ ಬರೋವರೆಗೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕು. ವರದಿ ನೆಗೆಟಿವ್ ಬಂದ […]

Advertisement

Wordpress Social Share Plugin powered by Ultimatelysocial