ಗಲ್ವಾನ್ ಪ್ರದೇಶದಿಂದ ಹಿಂದೆ ಸರಿದ ಸೇನೆಗಳು

ಗಲ್ವಾನ್ ಕಣಿವೆ ಪ್ರದೇಶದಿಂದ ಭಾರತ ಹಾಗೂ ಚೀನಾ ಸೇನೆಗಳು ಹಿಂದೆ ಸರಿದಿವೆ. ಆದರೆ ಚೀನಾ ಸೇನಾ ಪಡೆ ನಿಜವಾಗಿಯೂ ಗಡಿ ಪ್ರದೇಶದಿಂದ ಹಿಂದೆ ಸರಿದಿದೆಯೇ ಎಂಬುದನ್ನು ಭಾರತ ಸೇನೆ ಪರಿಶೀಲಿಸಲು ಮುಂದಾಗಿದೆ. ಗಲ್ವಾನ್ ಕಣಿವೆಯಲ್ಲಿ ತೀವ್ರ ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು. ಜೂನ್ 15ರಂದು ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಕಳೆದ ವಾರ ಕಮಾಂಡರ್ ಹಂತದ ಸಭೆಯಲ್ಲಿ ಉಭಯ ದೇಶಗಳು ಗಡಿ ಪ್ರದೇಶದಿಂದ 2-3 ಕಿ.ಮೀ. ಹಿಂದೆ ಸರಿಯಬೇಕೆಂಬ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಗಡಿ ಪ್ರದೇಶದಲ್ಲಿ ತಾಪಮಾನ ಏರಿಕೆ ಉಂಟಾಗಿರುವ ಪರಿಣಾಮ ನದಿ ನೀರಿನ ಪ್ರವಾಹ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದ್ದು,ಈ ಕಾರಣದಿಂದ ಚೀನೀ ಸೇನೆ ಹಂತ ಹಂತವಾಗಿ ಹಿಂದೆ ಸರಿಯುವ ಸೂಚನೆ ಕಂಡುಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಶಿವಲಿಂಗಕ್ಕೆ ನಡೆಯುವ ಆರತಿಯ ನೇರ ಪ್ರಸಾರ

Mon Jul 6 , 2020
ಇತಿಹಾಸದಲ್ಲೇ ಮೊದಲ ಬಾರಿಗೆ ಅಮರನಾಥ ಗುಹೆಯಲ್ಲಿನ ಮಂಜಿನ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ನೇರ ಪ್ರಸಾರ ಮಾಡಲಾಗುತ್ತದೆ.ಎಂದು ಆಡಳಿತ ಮಂಡಳಿ ತಿಳಿಸಿದೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಡಿಡಿ ವಾಹಿನಿಯಲ್ಲಿ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ನೇರ ಪ್ರಸಾರ ಮಾಡಲು ದೇವಾಲಯ ಮಂಡಳಿ ನಿರ್ಧರಿಸಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಆಡಳಿತ ಮಂಡಳಿ  ನಡೆಸಿದೆ. ಈ ಹಿಂದಿನ ಯೋಜನೆಯ ಪ್ರಕಾರ ಜಮ್ಮು-ಕಾಶ್ಮೀರ ಆಡಳಿತ ಅಮರನಾಥ ಯಾತ್ರೆಯ ವೇಳೆ ಗರಿಷ್ಠ 500 ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವುದಕ್ಕೆ […]

Advertisement

Wordpress Social Share Plugin powered by Ultimatelysocial