ರಾಯಚೂರನಲ್ಲಿ FCI ಗೋದಾಮಿನಿಂದ ಬಿಸಿಎಂ ಹಾಸ್ಟೆಲ್ ವರೆಗೆ ಸಂಪೂರ್ಣ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದಿದ್ದು. ರೈತರು ರಸ ಗೊಬ್ಬರ ಬೀಜಗಳನ್ನು ಹಾಗೂ ಬಾಣಂತಿಯರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಹರಸಾಹಸ ಪಡುವಂತಾಗಿದೆ .ಇಂತಹ ಸಂದರ್ಭದಲ್ಲಿ ನಗರಸಭೆ ಸದಸ್ಯರು ಕಂಡು ಕಾಣದೆ ಕೇಳಿ ಕೇಳದೆ ತಿರುಗುತ್ತಿದ್ದಾರೆ. ಸಾರ್ವಜನಿಕರ ಕೂಗು ನಗರಸಭೆ ಸದಸ್ಯರಿಗೆ ಕೇಳಿಸುತ್ತಿಲ್ಲ. ನಗರದ ಶಾಸಕರೇ ನೀವಾದರೂ ಸ್ಥಳವನ್ನು ಪರಿಶೀಲಿಸಿ ಮೈಮರೆತು ಕುಳಿತಿರುವ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವಾದರೂ ಮಾಡಿ ಎಂದು ಸಾರ್ವಜನಿಕರು ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನರ ಕೂಗು ನಗರಸಭೆ ಸದಸ್ಯರಿಗೆ ಕೇಳುತ್ತಿಲ್ಲ
Please follow and like us: