ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕೊರೊನ ಮಹಾಮಾರಿಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ ಲಾಕ್ ಡೌನ್ ಸಡಿಲಿಕೆ ಇದ್ದರು ಸಹ ಜನರಿಗೆ ಕೆಲಸ ತುಂಬಾ ವಿರಳವಾಗಿರುವದರಿಂದ ಜನರಿಗೆ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲಂತಾಗಿದೆ. ಅದರಲ್ಲಿ ಕಡುಬಡವರ ಗತಿ ಕೇಳುವಂತಿಲ್ಲ,  ಇಂತಹ ಸಂದರ್ಭದಲ್ಲಿ  ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನಗರ ಘಟಕ ವತಿಯಿಂದ ಕಡು ಬಡವರಿಗೆ ಹಾಗೂ  ನಿರ್ಗತಿಕರಿಗೆ  ಆಹಾರ ಧಾನ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನ ಜಿಲ್ಲಾ ಅಧ್ಯಕ್ಷ ಸುಧಾಕರ ಕೋಟೆ ಮಾತನಾಡಿ, ನಾವು ಈ ನೌಬಾದ್ ಪ್ರಾಂತ್ಯದಲ್ಲಿ ಕಡುಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡುತ್ತಿದ್ದೇವೆ,  ಮುಂದಿನ ದಿನಮಾನಗಳಲ್ಲಿ ಇಡಿ ಬೀದರ ನಗರದಲ್ಲಿ ಕಡು ಬಡವರನ್ನು ಗುರುತಿಸಿ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

200 ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಡಿ ಕೆಲಸ

Thu Jul 30 , 2020
ರಾಯಚೂರು ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸುಮಾರು 200ಜನ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಹೇಳಿದ್ದಾರೆ. ಲಾಕ್ ಡೌನ್ ನಿಂದ ಕಾರ್ಮಿಕರಿಗೆ ಕೆಲಸ ಇಲ್ಲದೆ ಕಂಗಾಲಾಗಿದ್ದರು. ಪಂಚಾಯಿತಿಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ, ರೈತರಿಗೆ ಅನುಕೂಲವಾಗುವ ಕೃಷಿ ಹೊಂಡ,ಬದು ನಿರ್ಮಾಣ, ಕೆರೆ ನಿರ್ಮಾಣ, ಗೋಕುಂಟೆ ಸೇರಿದಂತೆ ಅನೇಕ ಕೆಲಸಗಳನ್ನು ಈಗಾಗಲೇ ನೀಡಲಾಗಿದೆ. ಇನ್ನು ಕೂಲಿಕಾರ್ಮಿಕರಿಗೆ […]

Advertisement

Wordpress Social Share Plugin powered by Ultimatelysocial