ಕೊರೊನ ಮಹಾಮಾರಿಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ ಲಾಕ್ ಡೌನ್ ಸಡಿಲಿಕೆ ಇದ್ದರು ಸಹ ಜನರಿಗೆ ಕೆಲಸ ತುಂಬಾ ವಿರಳವಾಗಿರುವದರಿಂದ ಜನರಿಗೆ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲಂತಾಗಿದೆ. ಅದರಲ್ಲಿ ಕಡುಬಡವರ ಗತಿ ಕೇಳುವಂತಿಲ್ಲ, ಇಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನಗರ ಘಟಕ ವತಿಯಿಂದ ಕಡು ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನ ಜಿಲ್ಲಾ ಅಧ್ಯಕ್ಷ ಸುಧಾಕರ ಕೋಟೆ ಮಾತನಾಡಿ, ನಾವು ಈ ನೌಬಾದ್ ಪ್ರಾಂತ್ಯದಲ್ಲಿ ಕಡುಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡುತ್ತಿದ್ದೇವೆ, ಮುಂದಿನ ದಿನಮಾನಗಳಲ್ಲಿ ಇಡಿ ಬೀದರ ನಗರದಲ್ಲಿ ಕಡು ಬಡವರನ್ನು ಗುರುತಿಸಿ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ
Please follow and like us: